ಉಡುಪಿ: 2023-24ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ನಾಲ್ಕು ರ್ಯಾಂಕ್ ಗಳು ದೊರೆತಿವೆ.
ಬಿ.ಸಿ.ಎ ಯ ಪ್ರತೀಕ್ಷಾ ಹಾಗೂ ವರ್ಷಿಣಿ ಏಳನೇ ರ್ಯಾಂಕ್ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎಸ್ಸಿ. (ರಸಾಯನಶಾಸ್ತ್ರ) ದಲ್ಲಿ ಮೆಲಿಷಾ ಡಿ ಸಾ ದ್ವಿತೀಯ ರ್ಯಾಂಕ್ , ಎಂ. ಕಾಂ. ನಲ್ಲಿ ಶ್ರೇಯಾ ಏಳನೇ ರ್ಯಾಂಕ್ ಪಡೆದಿದ್ದಾರೆ. ಎಂ. ಎಸ್ಸಿ ಗಣಿತ ಶಾಸ್ತ್ರದಲ್ಲಿ 2ನೇ ಸ್ಥಾನ ಪಡೆದ ಅನುಷಾ ಇವರು ರಾಮಾನುಜನ್ ನಗದು ಪುರಸ್ಕಾರಕ್ಕೆ ಹಾಗೂ ಅಪೇಕ್ಷಾ ಪೂಜಾರಿ ಇವರು ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಸಿಪ್ರಿಯನ್ ಕಾರ್ಮೆಲ್ಲೋ ನಗದು ಬಹುಮಾನಕ್ಕೆ ಭಾಜನರಾಗಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಂಶುಪಾಲರಾದ ಡಾ. ಶ್ರೀಧರ ಪ್ರಸಾದ ಕೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.