ಬಂಟ್ವಾಳ ತಾಲೂಕಿನ ರಾಯಿ ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಜೂನ್ 18 ರಂದು ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಬದುಕು, ಸರಕಾರಿ ಸೌಲಭ್ಯಗಳ ಮಾಹಿತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಪತ್ರಿಕಾ ವರದಿಗಾರ, ಸಂಪನ್ಮೂಲ ವ್ಯಕ್ತಿ, ಮೂಡುಬಿದಿರೆಯ ರಾಯಿ ರಾಜಕುಮಾರರು ಆಗಮಿಸಿದ್ದರು. ಸರಕಾರಿ ಶಾಲೆಗಳಲ್ಲಿ ಆಹಾರ, ಹಾಲು, ಯುನಿಫಾರ್ಮ್, ಕೊಡೆ, ಪುಸ್ತಕ, ಚಪ್ಪಲಿ, ಶೂ, ಹಾಗೂ ಇತರ ಸಾಮಗ್ರಿಗಳನ್ನು ಸರಕಾರ ಸಂಪೂರ್ಣ ಉಚಿತವಾಗಿ ಒದಗಿಸುತ್ತಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ವಿದ್ಯೆ ಪಡೆದು ಕನ್ನಡ ಮಾಧ್ಯಮದ ಹಿರಿಮೆಯನ್ನು ಹೆಚ್ಚಿಸಬೇಕು. ನಮ್ಮ ಪರಿಸರವನ್ನು ಸಾಧ್ಯವಾದಷ್ಟು ಸ್ವಚ್ಛ, ಶುದ್ಧವಾಗಿರಿಸಲು ಎಲ್ಲರೂ ಪ್ರಯತ್ನಿಸಬೇಕು. ಪ್ಲಾಸ್ಟಿಕ್ ಬಳಕೆ ಆದಷ್ಟೂ ಕಡಿಮೆಗೊಳಿಸಿ, ಪರಿಸರದಲ್ಲಿ ಕಂಡುಬರುವ ಪ್ಲಾಸ್ಟಿಕ್ ನ್ನ ಸ್ವತಃ ಮರು ಬಳಕೆಗೆ ನೀಡಿ ನೀರು, ಗಾಳಿ, ಮಣ್ಣಿನ ಪರಿಶುದ್ಧತೆಯನ್ನು ಕಾಪಾಡಬೇಕು ಎಂದು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು.
ವೇದಿಕೆಯಲ್ಲಿ ಶಿಕ್ಷಕರಾದ ಬೇಬಿ, ತನುಜಾಕ್ಷಿ, ಭಾರತಿ, ನಿಖಿತಾ ಹಾಜರಿದ್ದರು. ಮುಖ್ಯ ಶಿಕ್ಷಕಿ ಜಾನೆಟ್ ಕೊನ್ಸೆಸೊ ಸ್ವಾಗತಿಸಿದರು. ಶಿಕ್ಷಕ ಸಿದ್ದಪ್ಪ ವಂದಿಸಿದರು.