ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದ ಹಿಂದೂ ದ್ವೇಷವು ಈಗ ದೇವಾಲಯಗಳ ಮೇಲಿನ ದಾಳಿಯಾಗಿ ಪರಿವರ್ತನೆ ಆಗಿದೆ, ಏನು ಮಾಡಲಿ ಎಂದು ಕೆನಡಾದ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅಲವತ್ತುಕೊಂಡಿದ್ದಾರೆ.  ಇತ್ತೀಚಿಗೆ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮತ್ತು ದ್ವೇಷದ ಗೋಡೆ ಬರಹ ಕಾಣಿಸಿಕೊಂಡಿತ್ತು.

ಈಗ ಹೊಸದಾಗಿ ಕೆನಡಾದ ಬ್ರಾಂಪ್ಟನ್‌ನಲ್ಲಿನ ಗೌರಿಶಂಕರ ದೇವಾಲಯದ ಮೇಲೆ ದಾಳಿ ಆಗಿದೆ. ತಪ್ಪಿತಸ್ಥರನ್ನು ಬೇಗನೆ ಪತ್ತೆ ಮಾಡಿ, ಕ್ರಮ ತೆಗೆದುಕೊಳ್ಳುವಂತೆ ಸಂಸದ ಆರ್ಯ ಕೆನಡಾ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ದ್ವೇಷ, ದಾಳಿ ಹೇಳಿಕೆಯನ್ನು ಆರ್ಯರು ಭಾರತ ಸರಕಾರಕ್ಕೂ ರಾಯಭಾರ ಕಚೇರಿ ಮೂಲಕ ತಿಳಿಸಿದಲ್ಲಿ ಜಾಗತಿಕವಾಗಿ ಕ್ರಮ ಕೈಗೊಳ್ಳಲು ಸುಲಭವಾಗುತ್ತಿತ್ತು ಎಂದು ಹಲವರು ಹೇಳಿರುವುದಾಗಿ ವರದಿಯಾಗಿದೆ.