ಮಂಗಳೂರು:- ಅಖಿಲ ಭಾರತ ಕಾಂಗ್ರೆಸ್ (ಎ.ಐ.ಸಿ.ಸಿ) ಪಕ್ಷದ ಕಾರ್ಯದರ್ಶಿಯಾಗಿ ದೆಹಲಿಯ ಕಚೇರಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ (ಪ್ರಧಾನ ಕಾರ್ಯದರ್ಶಿ ಆಡಳಿತ) ಕೆ.ಸಿ.ವೇಣುಗೋಪಾಲ್ ಇವರ ಸಮ್ಮುಖದಲ್ಲಿ ಐವನ್ ಡಿಸೋಜ ಅಧಿಕಾರ ಸ್ವೀಕರಿಸಿದರು.
ಐವನ್ ಡಿಸೋಜ ಇವರಿಗೆ ಕೇರಳ ರಾಜ್ಯದ ಹೊಣೆಗಾರಿಕೆ ನೀಡಲಾಗಿದ್ದು, ಈಗಾಗಲೇ ತಿರುವನಂತಪುರಂಗೆ ತೆರಳಿ, ಪಕ್ಷದ ನಾಯಕರುಗಳ ಜೊತೆ ಚರ್ಚಿಸಿ, ಮುಂಬರುವ ವಿಧಾನ ಸಭಾ ಚುನಾವಣೆ ಬಗ್ಗೆ ರೂಪುರೇಖೆಗಳನ್ನು ತಯಾರಿಸಲಾಗಿದ್ದು, ದೆಹಲಿಯಲ್ಲಿ ಕೇರಳ ರಾಜ್ಯದ ಹಿರಿಯ ನಾಯಕರಾದ ಎ.ಕೆ.ಆಂಟನಿ, ವಿನ್ಸೆಂಟ್ಜಾರ್ಜ್, ಶ್ರೀ ಮುರಳೀಧರ ಮತ್ತು ಕೇರಳ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳಾದ ಥಾರೀಖ್ ಅನ್ವರ್ ಇವರುಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.