ಮಂಗಳೂರಿನ ಹವ್ಯಾಸಿ ನಾಟಕ ತಂಡ ಜರ್ನಿ ಥೇಟರ್ ಗ್ರೂಪ್(ರಿ), ಮಂಗಳೂರು ಇದರ ವಾರ್ಷಿಕ ಮಹಾಸಭೆ 21ಆಗಸ್ಟ್, ಶನಿವಾರದಂದು ಬಜಾಲ್ ನಲ್ಲಿರುವ ನೋಂದಾಯಿತ ಕಛೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ನಡೆದು ಹೊಸ ಸಮಿತಿಯು ರಚನೆಯಾಯಿತು.

ಭವ್ಯ ಶೆಟ್ಟಿ

ಕಿಂಗ್ಸ್ ಲೀ ನಜರತ್

ರೋಹನ್ ಉಚ್ಚಿಲ

ಅಧ್ಯಕ್ತರಾಗಿ ಭವ್ಯ ಶೆಟ್ಟಿ, ಉಪಾಧ್ಯಕ್ಷರಾಗಿ ಕಿಂಗ್ಸ್ ಲೀ ನಜರತ್, ಕಾರ್ಯದರ್ಶಿಯಾಗಿ ರೋಹನ್ ಉಚ್ಚಿಲ ಮತ್ತು ಖಜಾಂಚಿಯಾಗಿ ಅರ್ಜುನ ಆಚಾರ್ಯ ಇವರುಗಳು ಆಯ್ಕೆಗೊಂಡರು. ಇದೇ ಸಂದರ್ಭದಲ್ಲಿ ವಿವಿಧ ಕಾರ್ಯಕಾರಿ ಸಮಿತಿಗಳ ಸಂಯೋಜಕರಾಗಿ ಸುನಿಲ್ ಪಲ್ಲಮಜಲು, ಮೇಘನಾ ಕುಂದಾಪುರ, ರಾಘವ್ ಸೂರಿ, ಯೋಗೀಶ್ ಜಪ್ಪಿನಮೊಗರು, ಕಿರಣ್ ಕುಮಾರ್, ಚಿನ್ಮಯಿ ವಿ. ಭಟ್, ಅರ್ಲ್ ಬ್ಯಾನ್, ಶಶಾಂಕ್ಐ ತಾಳ್, ಸುಧೀಶ ಕೆ. ಹಾಗೂ ಸಲಹೆಗಾರರಾಗಿ ನಾಗರಾಜ್‌, ಬಜಾಲ್, ಜೀವನ್ ಸೋಮೇಶ್ವರ ಮತ್ತು ಮನೋಜ್ ವಾಮಂಜೂರ್ ಇವರುಗಳನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೀಪಕ್ ಕಲಾಯಿ ಸ್ವಾಗತಿಸಿ, ಅರ್ಜುನ್ ಆಚಾರ್ಯ 2020-21ನೇ ಸಾಲಿನ ವರದಿಯನ್ನು ಓದಿ ಕಾರ್ಯಕ್ರಮ ನಿರ್ವಹಿಸಿದರು. ನೂತನ ಅಧ್ಯಕ್ಷರಾದ ಭವ್ಯ ಶೆಟ್ಟಿ ಪದಾಧಿಕಾರಿಗಳನ್ನು ಅಭಿನಂದಿಸಿ, ತಂಡವು ಹತ್ತು ವರುಷಗಳಲ್ಲಿ ಸಾಗಿ ಬಂದ ಪಯಣದ ಸಂಕ್ಷಿಪ್ತ ನೋಟ, ಬೆಳವಣಿಗೆ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಬಗೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆಯೂ ವಿವರಿಸಿದರು.