ಮಂಗಳೂರು: ತೋಟಗಾರಿಕೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ, ಪಂಚಾಯತ್, ದಕ್ಷಿಣಕನ್ನಡ ಜಿಲ್ಲೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ, ಸಮಿತಿ ಮಂಗಳೂರು ಇವರ ಸಂಯುಕ್ತಆಶ್ರಯದಲ್ಲಿ ಸಿರಿ ತೋಟಗಾರಿಕೆ ಸಂಘ(ರಿ) ಮತ್ತು ಇತರೇ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಭಾರತದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 23 ರಿಂದ 26 ರ ವರೆಗೆ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಈ ವರ್ಷದ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು:

1. ಪುಷ್ಪಕಲಾಕೃತಿಗಳ ಪ್ರದರ್ಶನ:

ಫಲಪುಷ್ಪ ಪ್ರದರ್ಶನದ ಅಂಗವಾಗಿ ಮುಖ್ಯ ಆಕರ್ಷಣೆಯಾಗಿ ಹೂವುಗಳಿಂದ EIFFEL TOWER ನ್ನು ಸುಮಾರು 22 ಅಡಿ ಎತ್ತರ, 12 ಅಡಿ ಸುತ್ತಳತೆಯಲ್ಲಿ ಅಂದಾಜು 2 ಲಕ್ಷ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗುವುದು. ಇದರ ಜೊತೆಗೆ ಮಕ್ಕಳಿಗೆ ಮನರಂಜನೆ ನೀಡುವಂತಹ ಹೂವುಗಳಿಂದ ಅಲಂಕರಿಸಿದ ಫೋಟೋಪ್ರೇಮ್, Selfy Zone ಮಾದರಿ, ಮತ್ತು mushroom, Canon boll, honey bee, micky mouse ಮತ್ತು swan ವಿವಿಧ ವರ್ಣದ ಜಾತಿಯ ಪುಷ್ಪಗಳಿಂದ ನಿರ್ಮಿಸಿದ 4 ರಿಂದ 6 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು.

2. ಸಿರಿ ದಾನ್ಯ ಕಲಾಕೃತಿಗಳು:

ಸಿರಿ ದಾನ್ಯದಲ್ಲಿ ಮತ್ತು ಅಲಂಕಾರಿಕಾ ಎಲೆಗಳಿಂದ ಕಂಬಳ ಕೋಣದ ಮಾದರಿಯನ್ನು 5 ರಿಂದ 6 ಅಡಿ ಸುತ್ತಳತೆಯಲ್ಲಿ ತಯಾರಿಸಿ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು, ಇದರ ಜೊತೆಗೆ ಸಿರಿದಾನ್ಯದಲ್ಲಿ ಯಕ್ಷಗಾನದ ಎರಡು ಕಲಾಕೃತಿ ಮತ್ತು ಮೀನುಗಾರರ ಮತ್ತು ಕಂಬಳ ಓಟಗಾರನ ಬಗ್ಗೆ ಕಲಾಕೃತಿಯನ್ನು ನಿರ್ಮಿಸಿ ಪ್ರದರ್ಶಿಸಲಾಗುವುದು.

3. ಅಲಂಕಾರಿಕಾ ಹೂ ಜೋಡಣೆ:

ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ಮಂಗಳೂರು ಕದ್ರಿ ಉದ್ಯಾನವನದಲ್ಲಿ ಸುಮಾರು 20,000 ಸಂಖ್ಯೆಯ ಮೂವತ್ತಕ್ಕೂ ಹೆಚ್ಚು ವಿವಿಧ ಜಾತಿಯ ಹೂವುಗಳಾದ ಸಾಕ್ಷ್ಯಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್,ವಿಂಕಾ ರೋಸಿಯಾ, ಕಾಕ್ಸ್‍ಕೋಂಬ್, ಡೇಲಿಯಾ, ಪೆಟೂನಿಯಾ, ಟೊರಿನೋ, ಜರೇನಿಯಂ, ಪಾಯಿನ್ ಸಿಟಿಯ, ಆಮೇರಿಕನ್ ಡೈಸಿ ಇತ್ಯಾದಿ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದ್ದು ವಿವಿಧ ಆಕಾರಗಳಲ್ಲಿ ಪ್ರದರ್ಶನದಲ್ಲಿ ಜೋಡಿಸಲಾಗುವುದು, ಹಾಗೂ ತರಕಾರಿ ಕೈತೋಟದ ಪ್ರಾತ್ಯಕ್ಷತೆಯನ್ನು ಏರ್ಪಡಿಸಲಾಗುವುದು.

4. ತರಕಾರಿ ಕೆತ್ತನೆ:

ಹಣ್ಣು ಮತ್ತು ತರಕಾರಿಗಳಿಂದ ಜಿಲ್ಲೆಯ ಪ್ರಾಮುಖ್ಯತೆಯ ಬಗ್ಗೆ, ಹಾಗೂ ವಿವಿಧ ಕ್ಷೇತ್ರಗಳ ಗಣ್ಯರುಗಳ ಕಲಾಕೃತಿಗಳನ್ನು ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು.

5. ಇಕಬೆನಾ:

ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಇಕೆಬೆನಾ ಹೂವಿನ ಜೋಡಣೆಯ ಪ್ರದರ್ಶನಗಳನ್ನು ಏರ್ಪಡಿಸಲಾಗುವುದು.

6. ಜೇನು ಉತ್ಪಾದನೆ ಮತ್ತು ಮಾದರಿ ಹಾಗೂ ಉತ್ಪನ್ನಗಳ ಪ್ರದರ್ಶನ:

ಝೇಂಕಾರ ಬ್ರಾಂಡಿನಡಿ ಜೇನು ಮಾರಾಟ ಮತ್ತು ಸಂಸ್ಕರಣೆ ಹಾಗೂ ಗುಣಮಟ್ಟ ಸುಧಾರಿಸುವ ಬಗ್ಗೆ ಮಾಹಿತಿ/ಪ್ರಚಾರಕೈಗೊಂಡು, ವಿವಿಧಜೇನು ಸಹಕಾರ ಸಂಘ, ರೈತ ಉತ್ಪಾದಕರ ಸಂಸ್ಥೆಗಳಿಂದ ಜೇನಿನ ವಿವಿದ ತಳಿಗಳ, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಜೇನಯ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಲಾಗುವುದು.

7. ಪಶ್ಚಿಮ ಘಟ್ಟದ ಸಸ್ಯ ಪ್ರಭೇದಗಳು ಮತ್ತು ಅಲಂಕಾರಿಕಾ ಹೂ ಗಿಡಗಳ ಪ್ರದರ್ಶನ :

ಪಿಲಿಕುಳ ಜೈವಿಕ ಉದ್ಯಾನವನರವರಿಂದ ಪಶ್ಚಿಮ ಘಟ್ಟದ ಪ್ರಮುಖ ಸಸ್ಯ ಪ್ರಭೇದಗಳು ಮತ್ತು ಮಾಹಿತಿ ನೀಡುವುದು. ಔಷದೀಯ ಗಿಡಗಳ ಪ್ರದರ್ಶನ ಮತ್ತು ಮಹತ್ವ ಹಾಗೂ ರೈತಉತ್ಪಾದಕರ ಸಂಸ್ಥೆಗಳಿಂದ ವಿವಿದ ದೇಶಿ ಸೀಡ್ಸ್ ಗಳ ಪ್ರದರ್ಶನ ಮಾಡಲಾಗುವುದು

8. ಸಸ್ಯ ಉತ್ಸವ;

ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋಪಕರಣಗಳ ಮಾರಾಟಗಾರರು ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿರುತ್ತದೆ. ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುವುದು.

9. ಪ್ರವೇಶ ಶುಲ್ಕ:

ಫಲಪುಷ್ಪ ಪ್ರದರ್ಶನದಲ್ಲಿ ವಯಸ್ಕರಿಗೆರೂ 30 ರೂಗಳು ಮತ್ತು ಮಕ್ಕಳಿಗೆ ರೂ 20 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಶಾಲಾ ಶಿಕ್ಷಕರೊಂದಿಗೆ ಸಮವಸ್ತ್ರದಲಿ.. ಆಗಮಿಸುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9  ರಿಂದ ಸಂಜೆ 4 ರ ವರೆಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿರುತ್ತದೆ. ಉಳಿದಂತೆ ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ 9 ರಿಂದ ರಾತ್ರಿ 9 ರ ವರೆಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.

10. ರೈತರ ಹಣ್ಣು ಮತ್ತು ತರಕಾರಿಗಳ ಮಾದರಿ ಪ್ರದರ್ಶನ:

ಜಿಲೆಯ ವ್ಯಾಪ್ತಿಯಲ್ಲಿ ಪ್ರಗತಿಪರ ರೈತರು ಬೆಳೆದಿರುವಂತಹ ವಿಶಿಷ್ಟ ಬಗೆಯ ಹಣ್ಣು, ತರಕಾರಿ, ತೋಟದ ಬೆಳೆಗಳು,ಸಾಂಬಾರು ಬೆಳೆಗಳ ಪ್ರದರ್ಶಿಕೆಗಳು, ತೋಟಗಾರಿಕೆ ಕರಕುಶಲತೆಗಳು, ಸಾರ್ವಜನಿಕರು ಬೆಳೆಸಿರುವ ಆಂಥೋರಿಯಂ ಗಿಡಗಳು, ಇತರೇ ಆಕರ್ಷಣೀಯವಾದ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆದಂತಹ ಪ್ರದರ್ಶಿಕೆಗಳನ್ನು ದಿನಾಂಕ: 22.01.2025 ರಂದು ಬೆಳಿಗ್ಗೆ 10.30 ಗಂಟೆಗೆ ಕದ್ರಿ ಉದ್ಯಾನವನಕ್ಕೆ ತರಲು ಕೋರಿದೆ.

11. ಗೆಡ್ಡೆಗೆಣಸು ಮತ್ತು ದೇಸಿ ಬೀಜಗಳ ಪ್ರದರ್ಶನ ಮತ್ತು ಮಾರಾಟ:

ದೇಸಿ ಸೀಡ್ಸ್ ಪ್ರೊಡ್ಯೂಸರ್ ಕಂಪೆನಿ ಮೈಸೂರುರವರಿಂದ ವಿವಿಧಗೆಡ್ಡೆ ಗೆಣಸುಗಳ ಪ್ರದರ್ಶನ ಮಾಹಿತಿ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

12. ಸ್ವಸಹಾಯ ಸಂಘಗಳ (NRLM) ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ:

ರಾಷ್ಟ್ರೀಯ ಜೀವನೋಪಾಯ ಯೋಜನೆಯಡಿ ಅಭಿವೃದ್ಧಿಪಡಿಸಲಾದ ವಿವಿಧ ಸ್ವಸಹಾಯ ಸಂಘಗಳು ಉತ್ಪಾದನೆ ಮಾಡಲಾಗುವ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಜಿಲ್ಲಾ ಪಂಚಾಯತ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.