ಮಂಗಳೂರು: ಮಂಗಳೂರಿನ ಬಾರೆಬೈಲಿನಲ್ಲಿರುವ 3sk ಎಕಾಡೆಮಿಯ ಸಂಸ್ಥೆಯ ಆವರಣದಲ್ಲಿ ಮು೦ಜಾನೆ 10-30ರಿಂದ ನಡುಹಗಲು ತನಕ ನಡೆದ 3sk ಎಕಾಡೆಮಿಯ ನಾಲ್ಕನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಕಾಡೆಮಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು.
3sk ಎಕಾಡೆಮಿಯ ಸಂಸ್ಥಾಪಕರಾದ ಸಹನಾ ಕಾರ್ತಿಕ್ ಮತ್ತು ಕಾರ್ತಿಕ್ ಬಿ.ಎನ್ ರವರು ಬೆಳಗಿಸಿದ ಕ್ಯಾಂಡಲ್ ನ್ನು ಹೂಗುಚ್ಛವಾಗಿ ಅರಳಿಸುವ ವಿಶೇಷ ಜಾದೂ ಮುಖಾಂತರ ವಾಗಿ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಆನಂತರ ಸಂಸ್ಥಾಪಕರ ಪುತ್ರಿ ಶ್ರೇಯಾ ಕೆ ಅಯ್ಯರ್ ರವರು ಕಲಾಸೃಷ್ಟಿ ಬಳಗದ ಜಾದೂ ಮುಖಾಂತರವೇ ಫ್ರೇಮ್ ಬಿಡುಗಡೆಗೊಳಿಸಿ ಜಾದೂ ಕಾರ್ಯಕ್ರಮಕ್ಕೆ ಚಾಲನೆ ಯನ್ನು ನೀಡಿದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಪ್ರೊ. ಮುಬೀನ ಪರ್ವೀನ.ತಾಜ್ , ಅಂತಾರ್ಷ್ಟ್ರೀಯ ಖ್ಯಾತಿಯ ಶಮಾ ಪರ್ವೀನ ತಾಜ್ ಮತ್ತು ಫಾತಿಮಾ ಶರೀಫ್ ,ಮಾಸ್ಟರ್ ಚಾಂದ್ ಷರೀಫ್ ಬಳಗದ ವತಿಯಂದ ಅತ್ಯಮೋಘ ಜಾದೂ ಕಾರ್ಯಕ್ರಮಗಳು ಸಂಪನ್ನವಾದುವು. ಈ ತಂಡದ ವಿವಿಧ ರೀತಿಯ ಕೈ ಚಳಕಗಳು ನೆರೆದವರನ್ನು ಮಂತ್ರಮುಗ್ಧ ಗೊಳಿಸಿದುವು.
ತರುವಾಯ ವಿವಿಧ ವಿನೋದಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಣೆ ಸಹಿತ ನಡೆದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರೂ ವಿದ್ಯಾರ್ಥಿಗಳ ಹೆತ್ತವರೂ ಭಾಗಿಯಾಗಿದ್ದರು.
ಸಂಸ್ಥೆಯ ಮುಖ್ಯಸ್ಥೆ ಸಹನಾ ಕಾರ್ತಿಕರವರು ಸರ್ವರನ್ನು ಸ್ವಾಗತಿಸಿದರು.