ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಡಿಸೆಂಬರ್ 18 ಭಾನುವಾರ ಮಂಗಳೂರಿನ ಕೆನರಾ ಸ್ಕೂಲ್ ಉರ್ವ ಇಲ್ಲಿಯ ಮಿಝಾರ್ ಗೋವಿಂದ ಪೈ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಿರುವ ನೂರೊಂದು ಕವಿಗಳ ಸಮಾಗಮದ ವಿನೂತನ ಸಮ್ಮೇಳನ 'ಕಾವ್ಯ ದಶಾವತಾರ- ಕವಿಕಾವ್ಯ ಸಮ್ಮಾನ' ಪ್ರಯುಕ್ತ ಅದೇ ದಿನ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದೆ. ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ "ನಮ್ಮ ಮನೆ", 5 ರಿಂದ 7ನೆ ತರಗತಿ ವಿದ್ಯಾರ್ಥಿಗಳಿಗೆ 'ನಮ್ಮ ಪರಿಸರ', 8 ರಿಂದ 10ನೇ ವಿದ್ಯಾರ್ಥಿಗಳು 'ನಮ್ಮೂರ ಹಬ್ಬ' ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ 'ಡಿಜಿಟಲ್ ಇಂಡಿಯಾ" ವಿಷಯದಲ್ಲಿ ಚಿತ್ರಗಳನ್ನು ಸ್ಥಳದಲ್ಲೇ ಬಿಡಿಸಬೇಕು.
ಸ್ಪರ್ಧೆಯ ಅವಧಿ ಎರಡು ಗಂಟೆಗಳು, ಏ-ತ್ರಿ ಗಾತ್ರದ ಡ್ರಾಯಿಂಗ್ ಶೀಟ್ ಮತ್ತು ಚಿತ್ರ ಬಿಡಿಸಲು ಬೇಕಾಗುವ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳೇ ತರಬೇಕು. ಪ್ರತಿ ವಿಭಾಗದಲ್ಲಿ ತಲಾ ಮೂರು ಬಹುಮಾನಗಳಿರುತ್ತವೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು 15 ತಾರೀಕಿನೊಳಗೆ ತಮ್ಮ ಹೆಸರುಗಳನ್ನು 9108425813/8310388415 ಸಂಖ್ಯೆಗೆ ವಾಟ್ಸಾಪ್ ಮಾಡಿ ನೋಂದಾಯಿಸಿಕೊಳ್ಳಬೇಕು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.