ಮಂಗಳೂರು:  27ನೇ ದ.ಕ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷ ಡಾ. ಪ್ರಭಾಕರ ಶಿಶಿಲ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಆವರಣದ ಸಮ್ಮೇಳನದ ಪ್ರಾಂಗಣದಲ್ಲಿ ಜಿಲ್ಲಾ ಕಸಾಪ ಆಧ್ಯಕ್ಷರಾದ ಡಾ. ಎಂಪಿ ಶ್ರೀನಾಥ ಕನ್ನಡದ ಶಾಲು ಹೊದಿಸಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಪ್ರಭಾಕರ ಶಿಶಿಲ‌ ಅವರು ಭಾಷೆ ಅಂದರೆ ಒಂದು ಸಂಸ್ಕೃತಿ. ಅದನ್ನು ಉಳಿಸುವ ಕೆಲಸ ಭಾಷಾ ಸಮ್ಮೇಳನದಲ್ಲಿ ಆಗಲಿ ಎಂದರು.

ಡಾ. ಧನಂಜಯ ಕುಂಬ್ಳೆ, ಚಂದ್ರಹಾಸ್ ಶೆಟ್ಟಿ ರಾಜೇಶ್ವರಿ ಎಂ, ರವೀಂದ್ರ ಶೆಟ್ಟಿ ಉಳಿದೋಟ್ಟು, ರವೀಂದ್ರ ರೈ ಕಲ್ಲಿಮಾರ್, ಪ್ರಸಾದ್ ರೈ ಕಲ್ಲಿಮಾರ್, ತ್ಯಾಗಮ್ ಹರೇಕಳ, ಪುಷ್ಪರಾಜ್ ಕೆ, ವಿಜಯಲಕ್ಷ್ಮಿ ಪಿ ಕಲ್ಲಿಮಾರ್, ಐತಪ್ಪ ನಾಯ್ಕ್, ತೋನ್ಸೆ ಪುಷ್ಕಲ್ ಕುಮಾರ್, ಪ್ರೊ. ಸರೋಜಿನಿ ಬಿ ಕೆ, ಡಾ. ಲವೀನಾ, ರಾಮಕೃಷ್ಣ ಭಟ್ ಚೊಕ್ಕಾಡಿ, ಆಶಾ ದಿಲೀಪ್, ಮಂಜುಳಾ ಇರಾ ಉಪಸ್ಥಿತರಿದ್ದರು.

ಪ್ರಚಾರ ಸಮಿತಿ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ವಂದಿಸಿದರು.