ಮೂಡುಬಿದರೆ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಐ.ಸಿ.ವೈ.ಎಮ್. ಹೊಸ್ಪೆಟ್ ಘಟಕ ಇವರ ಸಹಯೋಗದಲ್ಲಿ ಮೂಡುಬಿದಿರೆಯ ಹೊಸ್ಪೆಟ್ ಚರ್ಚ್ನ ಸಭಾಂಗಣದಲ್ಲಿ ಜೂಲೈ 20 ರಂದು ಭಾನುವಾರ ಬೆಳಿಗ್ಗೆ 10.00ಯಿಂದ ಸಂಜೆ 5.00ಗಂಟೆ ತನಕ ಕೊಂಕಣಿ ಸಾಹಿತ್ಯ ಕಾರ್ಯಗಾರವನ್ನು ಹಮ್ಮಿಕೊಂಡಿದೆ.  ಫೆಲ್ಸಿ ಲೋಬೊ, ದೆರೆಬೈಲ್ ಇವರು ಕವನ ಬರೆಯುವ ಕುರಿತು ತರಬೇತಿ ನೀಡಲಿರುವರು. ಕೊಂಕಣಿ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ಡಾ| ಜೊಯರ್ ರುಡೋಲ್ಪ್ ನೊರೊನ್ಹಾ ಹಾಗೂ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ರೊನಿ ಕ್ರಾಸ್ತಾ, ಕೆಲರಾಯ್ ಇವರು ಉಪನ್ಯಾಸವನ್ನು ನೀಡಲಿದ್ದಾರೆ. 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿರುವರು. ಮುಖ್ಯ ಅತಿಥಿಯಾಗಿ ಹೊಸ್ಪೆಟ್ ಚರ್ಚ್ನ ಧರ್ಮಗುರುಗಳಾದ ಅ|ವಂ| ಗ್ರೆಗೊರಿ ಡಿಸೋಜರವರು ಭಾಗವಹಿಸಲಿದ್ದಾರೆ. ಐ.ಸಿ.ವೈ.ಎಮ್ ಹೊಸ್ಪೆಟ್ ಘಟಕದ ಅಧ್ಯಕ್ಷರಾದ ರೊಲ್ಸ್ಟನ್ ಫ್ಲೆಮಿಂಗ್ ಡಿಸೋಜ, ಹೊಸ್ಪೆಟ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮನೋಹರ್ ಕುಟಿನ್ಹಾ, ಸಿ.ಎಸ್.ಸಿ.ಎ ಅಧ್ಯಕ್ಷರಾದ ವಿನೋದ್ ಪಿಂಟೊರವರು ಅತಿಥಿ ಗಣ್ಯರಾಗಿ ಉಪಸ್ಥಿತರಿರುವರು. ಕೆನರಾ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಇವರ ಸಹಕಾರದಲ್ಲಿ ಈ ಕಾರ್ಯಕ್ರಮವು ನಡೆಯಲಿರುವುದು.

ಈ ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತಿಗಳು ಹಾಗೂ ಕೊಂಕಣಿ ಅಭಿಮಾನಿಗಳು ಭಾಗವಹಿಸಲು ಕೋರಲಾಗಿದೆ.