ಚಿತ್ರದುರ್ಗದ ತಿಪ್ಪೇರುದ್ರಸ್ವಾಮಿ ಮಠದ ನೀರಿನ ಸಂಪಿನಲ್ಲಿ ತಾಯಿ ಮತ್ತು ಮಗಳು ಶವವಾಗಿ ಪತ್ತೆಯಾಗಿದ್ದು ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

44ರ ಗೀತಾ ಮತ್ತು 22ರ ಪ್ರಿಯಾಂಕಾ ಹೆಣವಾಗಿ ಕಂಡವರು. ಭದ್ರಾವತಿ ಕಡೆಯ ಈ ಇಡೀ ಕುಟುಂಬ ಆಶ್ರಮದಲ್ಲಿ ತಂಗಿತ್ತು. ಗೀತಾರ ಗಂಡ ಮತ್ತು ಮಗ ಹೊರಗೆ ಹೋಗಿ ವಾಪಾಸಾದಾಗ ಈ ಸಾವು ಪತ್ತೆಯಾಗಿದೆ. ಚಿತ್ರದುರ್ಗ ಬಡಾವಣೆ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.