ದೆಹಲಿ ಭೇಟಿ ಯಶಸ್ವಿಯಾಗಿದೆ. ಪ್ರಧಾನಿ ಮೋದಿಯವರು ನಮ್ಮ ಎರಡು ತಿಂಗಳ ಕೆಲಸ ಕಾರ್ಯಗಳನ್ನು ಮೆಚ್ಚಿದ್ದಾರೆ, ಬೆನ್ನು ತಟ್ಟಿದರು ಎಂದು ಎರಡು ದಿನಗಳ ದೆಹಲಿ ಭೇಟಿಯಿಂದ ಹಿಂತಿರುಗಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಂಗಳೂರಿನಲ್ಲಿ ಹೇಳಿದರು.

ಬಿಟ್ ಕಾಯಿನ್ ಮೊದಲಾದ ವಿಷಯಗಳೆಲ್ಲ ಬರಲಿಲ್ಲ. ನಾನೇ  ಪ್ರಸ್ತಾಪ ಮಾಡಿದಾಗಲೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಜನಪರ ಆಡಳಿತ ನೀಡಿ ಎಂದರು. ಹೋಗುತ್ತಿರುವ ಹಾದಿ ಸರಿಯಾಗಿದೆ, ಮುಂದುವರಿಸಿ ಎಂದಿದ್ದಾರೆ ಎಂದು ಬೊಮ್ಮಾಯಿಯವರು ಹೇಳಿದರು.