ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜೂನ್ ಎಂಟರ ರವಿವಾರ ಡಾ ಗಿರೀಶ್ ಹಾಗೂ ಡಾ ವಾಣಿಶ್ರೀ ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಶತ ಸಂಭ್ರಮ ಹಾಗೂ ಆಶುಕವಿ ಪೊಟ್ಟಿಪಲ‌ ನಾರಾಯಣ ಭಟ್ಟರ ಸಂಸ್ಮರಣ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು.

ಪುತ್ತೂರಿನ ದೇವಸ್ಥಾನದ  ವ್ಯವಸ್ಥಾಪಕ ಈಶ್ವರ ಭಟ್ಟರು ದೀಪ‌ ಪ್ರಜ್ವಲನೆ ಗೈದು ಪುತ್ತೂರು ಕ.ಸಾ.ಪ ಅಧ್ಯಕ್ಚ ಉಮೇಶ ನಾಯಕ್ ಉದ್ಘಾಟಿಸಿದ ಸಮಾರಂಭವು ಡಾ ಗಿರೀಶರ ಸಭಾಧ್ಯಕ್ಷತೆಯಲ್ಲಿ ಮುಂದುವರಿಯಿತು.

ಪೆರ್ಲದ ಉದ್ಯಮಿ ಪ್ರಸಾದ್ ಪೆರ್ಲರವರು ನುಡಿನಮನ ಮಾಡುತ್ತಾ ಕೀರ್ತಿಶೇಷ  ನಾರಾಯಣ ಭಟ್ಟರ ಗುಣಗಾನ ಮಾಡಿದರು.

ಶಿವಮಣಿ ಕಲಾಸಂಘದ ಶಿವಮಣಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿದರು.

ಗಂಗಾಧರ ಗಾಂಧಿ, ರಾಣಿ ಪುಷ್ಪಲತಾ ದೇವಿ,ಜಯಾನಂದ ಪೆರಾಜೆ ,ಹಾಗೂ ಶಾಂತಾ ಪುತ್ತೂರು ಅವರಿಗೆ ಪೊಟ್ಟಿಪಲ‌ ನಾರಾಯಷ ಭಟ್ ಸ್ಮಾರಕ ಆಶುಕವಿ ಪ್ರಶಸ್ಥಿ ಸಾಧಕ ಸನ್ಮಾನ‌ ಹಾಗೂ ಲಕ್ಷ್ಮಣ ಮೂರ್ತಿ ಕೆ ವಿ ಇವರು ಬರೆದ ರಾಣಿ ಅಬ್ಬಕ್ಕ ದೇವಿ ಕೃತಿಯ ಆರನೇ ಮರುಮುದ್ರಣದ ಲೋಕಾರ್ಪಣೆಯನ್ನು ಸಹ ಈ ಸಂಧರ್ಭದಲ್ಲಿ ಮಾಡಲಾಯಿತು.

ಹಲವು ಸಾಂಸ್ಕೃತಿಕ ಕಾರ್ಯಕ್ರಗಳಲ್ಲದೆ ಉತ್ಸಾಹಿ ಕವಿಗಳಿಂದ ಕೂಡಿದ ಕವಿಗೋಷ್ಠಿಯನ್ನು ಸಹ ಮಂಗಳೂರಿನ ಕಣಚೂರು ಆಸ್ಪತ್ರೆಯ ಮುಖ್ಯ ಸಲಹೆಗಾರ , ಮಂಗಳಾ ಆಸ್ಪತ್ರೆಯ ಮೂಲವ್ಯಾದಿ ಶಸ್ತ್ರ ಚಿಕಿತ್ಸಕ  ಹಾಗೂ ಗಜಲ್ ಕವಿ ಡಾ ಸುರೇಶ ನೆಗಳಗುಳಿ ಇವರ ಅದ್ಯಕ್ಷತೆಯಲ್ಲಿ ನಡೆಸಲಾಯಿತು.

ಅವರು ಮಾತನಾಡುತ್ತಾ ಎಲ್ಲರೂ ಭಾವಪೂರ್ಣರೂ ಕವಿ ಮನದವರೂ ಆಗಿರುತ್ತಾರೆ ಆದರೆ ಅದಕ್ಕೆ ಚೌಕಟ್ಟು ಹಾಗೂ ಅವಕಾಶ ದೊರಕಿದಾಗ ಕವಿಗಳಾಗುತ್ತಾರೆ. ಡಾ ವಾಣಿಶ್ರೀಯವರೂ ಸಹ ಕೆಲವಂ ಬಲ್ಲವರಿಂದ ಕಲ್ತು..ಎಂಬಂತೆ ಬಹಳ ಸಾಧಕರಾಗಿ ಇಂದೀ ಶತ ಸಂಭ್ರಮ‌ ಮಾಡುವ ಸ್ಥಿತಿಯನ್ನು ಹೊಂದಿದ್ದಾರೆ. ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿ ಎನ್ನುತ್ತಾ ಕವಿಗಳಿಗೆ ಕಿವಿಮಾತಾಗಿ  ಕವಿತೆಯ ಮುಖ್ಯ ಅಂಶಗಳ ಮಾಹಿತಿ ನೀಡಿದರು.

ಪ್ರಶಸ್ಥಿ ಪಡೆದ ಸಾಧಕರು ಮನದಾಳದ ಮಾತುಗಳನ್ನಾಡಿದರು. ಲಕ್ಷ್ಮಣ ಮೂರ್ತಿಯವರು ಕೃತಿ ಪರಿಚಯ ಮಾಡಿದರು.

ಕಾಸರಗೋಡ್ ಕ.ಸಾ.ಪ ಅಧ್ಯಕ್ಷ ಜಯ ಪ್ರಕಾಶ ನಾರಾಯಣ ತೊಟ್ಟತ್ತೋಡಿ ,ನಾರಾಯಣ ರೈ ಕುಕ್ಕುವಳ್ಳಿ ಮತ್ತಿತರ ಖ್ಯಾತನಾಮರು ಉಪಸ್ಥಿತರಿದ್ದರು.

ಕವಿಗೋಷ್ಠಿಗೆ ಪ್ರಣತಿ, ಶ್ರದ್ಧಾ ಮಹೇಶ್ ನಿಟ್ಲಾ, ಮೇಧಾ, ಶಾಂತಾ ಪುತ್ತೂರು. ಮುಖ್ಯ ಅಭ್ಯಾಗತರಾಗಿದ್ದರಲ್ಲದೆ  ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಕಲಾದೀಪಗಳಾದ ವಿದುಷಿ ಡಾ. ಗಾನ, ಅಹನಾ, ಪೂಜಾಶ್ರೀ, ಶ್ರದ್ಧಾ, ಮೇಧಾ, ನವ್ಯಶ್ರೀ, ದಿಯಾ, ಮಧುಲತಾ, ನಿಶಿತ್, ಧನಶ್ರೀ, ತಿರ್ಷ, ಪ್ರಣತಿ, ಗೌತಮಿ, ತನುಶ್ರೀ, ಶಿವಪ್ರಿಯ, ಯಶಿಕ, ಲಿಖಿತ, ನಿಹಾರಿಕಾ, ಶ್ರೇಯಾ, ನಂದನ್, ಗ್ರೀಷ್ಮ, ಕೃತ್ವಿಕ್, ಲೇಖನ್, ತೀರ್ಥನ್, ಬಸವರಾಜೇಶ್ವರಿ, ಮಲ್ಲಿಕಾರ್ಜುನ, ಹನುಮಂತಪ್ಪ, ನಾಗಯ್ಯ, ವೀರಬಸಪ್ಪ, ದೇವೇಂದ್ರಪ್ಪ, ಮಂಜುನಾಥ, ಪಂಪಾಪತಿ, ದೇವಪ್ಪ, ದುರುಗೇಶ, ಸೋಮಣ್ಣ, ಅಮರೇಶ, ಗಂಗಮಾಳಮ್ಮ, ಕೃಷ್ಣಮೂರ್ತಿ, ಶ್ರಾವ್ಯ, ಸಾನ್ವಿಕ, ತನ್ವಿ, ಪ್ರಣಮ್ಯ, ವರ್ಷ, ನಾಗಮ್ಮ, ಷಷ್ಠಿ, ಈ ಎಲ್ಲಾ ಕಲಾವಿದರು ವೇದಿಕೆಯ ಮೆರುಗು ಹೆಚ್ಚಿಸಿದರು. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗೌಡ ನೇತೃತ್ವದ ಕರ್ನಾಟಕ ಯುವಕ ಮಂಡಳಿ ಉಮಲೂಟಿ ಸಿಂಧನೂರು ತಾಲೂಕು ರಾಯಚೂರು ಜಿಲ್ಲೆ ಇವರಿಂದ ಜನಪದ ಕಲೆಯ ಅನಾವರಣ ನಡೆಯಿತು.. ನಾಗಶ್ರೀ ಪಂಚಶ್ರೀ ಕುಣಿತ ಭಜನಾ ತಂಡ ವಿದ್ಯಾಪುರ ಕಬಕ ತಂಡದ ಕುಣಿತ ಭಜನಾ ಕಾರ್ಯಕ್ರಮ, ಮಿತ್ರ ಸಮಾಜ ಮಹಿಳಾ ಭಜನಾ ಮಂಡಳಿ ಪುತ್ತೂರು ಭಜನಾ ಕಾರ್ಯಕ್ರಮಗಳು ಸಂಪನ್ನವಾದುವು.

ದಾವಣಗೆರೆಯ ಸಮಾಜ ಸೇವಕ ಕನ್ನಡಪರ ಹೋರಾಟಗಾರ ರಾಜಶೇಖರ್ ಕಾರ್ಯಕ್ರಮದ ಸಮಗ್ರ ನಿರೂಪಣೆ ಗೈದರು. ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಡಾ. ವಾಣಿಶ್ರೀ ಯವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಅಚ್ಯತ ಭಟ್ವ ವಂದಿಸಿದರು

ಇದೇ ಕಾರ್ಯಕ್ರಮದ ನೇರ ಪ್ರಸಾರವನ್ನು ಕಾರ್ತಿಕ್ ಕ್ರಿಯೇಶನ್ಸ್ ಏತಡ್ಕ ಇವರು ನಿರ್ವಹಿಸಿದ್ದರು.