ಮೈಸೂರು ದಸರಾ ನೋಡಲು ವಿಶೇಷ ಬಸ್ಸಿನಲ್ಲಿ 20 ಶಾಸಕರ ಜೊತೆಗೆ ಹೊರಟಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಸತೀಶ್ ಜಾರಕಿಹೊಳಿ ಅವರನ್ನು ತಡೆಯುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದೆ.
ಹೀಗೆ ಮಾಡಿದರೆ ಪ್ರತಿ ಪಕ್ಷಗಳವರಿಗೆ ಮಾತನಾಡಲು ಉಣಿಸು ನೀಡಿದಂತಾಗುತ್ತದೆ ಎನ್ನುವುದು ಕಾಂಗ್ರೆಸ್ ಹೈಕಮಾಂಡ್ ಹಿತವಚನ. ಒಟ್ಟಿಗೆ ಹೋಗಲು ಮಾತನಾಡಿ ಕೊಂಡಿದ್ದೆವು. ಬಸ್ಸು ಸಿದ್ಧವಾಗಿತ್ತು, ಮೈಸೂರು ಶಾಸಕರ ಆಹ್ವಾನವೂ ಇತ್ತು. ಕೊನೆಗೆ ನಾವು ನಾವೇ ಪ್ರತ್ಯೇಕವಾಗಿ ಹೋಗಲು ತೀರ್ಮಾನಿಸಿದೆವು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.