ಮಹಾರಾಷ್ಟ್ರದ ನವಲೆ ಸೇತುವೆ ಸಮೀಪ ಸ್ವಾಮಿ ನಾರಾಯಣ ಆಲಯದ ಎದುರು ನಿನ್ನೆ ರಾತ್ರಿ ಟ್ರಕ್ ಒಂದು ಸುಟ್ಟು ಹೋಗಿ‌ ನಾಲ್ವರು ಸಜೀವ ಸುಟ್ಟು ಹೋಗಿರುವುದಾಗಿ ಸಿಂಹಗಡ ರಸ್ತೆಯ ಪೋಲೀಸು ಠಾಣೆಯವರು ಮಾಹಿತಿ ನೀಡಿದ್ದಾರೆ.

ಕೆಲವರು ಬೆಂಕಿ ಆರಿಸಲು ಓಡಿ ಬಂದರಾದರೂ ಬೆಂಕಿಯ ತೀವ್ರತೆ ಅವರನ್ನು ಹತ್ತಿರ ಸಮೀಪಿಸಲು ಬಿಟ್ಟಿಲ್ಲ. ಸುಟ್ಟು ಸತ್ತ ನಾಲ್ವರು ಯಾರು ಎಂದು ಗುರುತು ಹಚ್ಚುವ ಪ್ರಯತ್ನದಲ್ಲಿ ಪೋಲೀಸರು ತೊಡಗಿದ್ದಾರೆ.