ಸರಳ ಜೀವನದ ಬಗ್ಗೆ ಮಾತನಾಡಲು ಬರೆಯಲು ನಾವು ಹಿಂಜರಿಯುವುದಿಲ್ಲ ಆದರೆ ಹಾಗೆ ಬದುಕಲು ಮಾತ್ರ ಹಿಂಗೇರಿಯುತ್ತೇವೆ ಕಬ್ಬಿನ ಹಾಲು, ಕೋಲ್ಡ್, ಶರಬತ್ತು ಎಳನೀರು ಇವೆಲ್ಲ ಶರೀರ ತಂಪು ಮಾಡುತ್ತವೆ ಅನ್ನೋದು ಭ್ರಮೆ..! ನೀರೇ ಅದರಸ್ಟ್ರು ತಂಪು ಇನ್ನೊಂದಿಲ್ಲ ಅನ್ನೋದು ವಾಸ್ತವ ನಮ್ಮ ದೇಹದಲ್ಲಿ ಮುಕ್ಕಾಲು ಭಾಗ ನೀರು ದೇಶದಲ್ಲಿ ಭೂಮಿಯ ಮುಕ್ಕಾಲು ಭಾಗ ನೀರೇ ಇರುವುದು ಪ್ರತಿಭೆ ಎಲ್ಲರಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇದೆ ಅದನ್ನು ಸರಿಯಾಗಿ ಸದ್ಬಳಕೆ ಮಾಡಿದಾಗ ಎಂತಹ ಚಮತ್ಕಾರ ನಾವು ಅನಾದಿಯಿಂದಲೂ ಮಡಿಕೆ ನೀರು ಹೂಜಿಯಲ್ಲಿ ಬಿಸಿ ನೀರು ಕುಡಿದವರೆ ಆದರೆ ಇತ್ತೀಚೆಗೆ ಎಲ್ಲಾ ಮರೆಯಾಗಿ ಮದುವೆ ,ಸಭೆ, ಸಭಾ ಕಾರ್ಯಕ್ರಮದಲ್ಲಿ ಬಾಟಲ್ ನೀರೇ ಮುಖ್ಯ ಎಂಬಂತೆ ಬಿಂಬಿತ ಶುದ್ಧ ನೀರು ಎನ್ನುವಂತೆ ಇದರಿಂದಲೇ ಪರಿಸರಕ್ಕೆ ಪ್ಲಾಸ್ಟಿಕ್ ತ್ಯಾಜ್ಯವೇ....?.

ಜೀವನದಲ್ಲಿ ಒಂದೊಂದು ಘಟನೆಗಳು ಒಂದೊಂದು ಪಾಠವನ್ನು ಕಲಿಸುತ್ತದೆ. ಗಡಿನಾಡ ದ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಡಳಿತ ವ್ಯವಸ್ಥೆಯು ಸದಾ ಚಿತ್ತ ಹರಿಸಲು ಮತ್ತು ವಿಶ್ವದೆಲ್ಲೆಡೆ ಗಡಿನಾಡ ಕನ್ನಡ ಸಮ್ಮೇಳನಗಳು ಮಹತ್ವ ಪಡೆದಿದೆ ಎಂಬ ಸದಾಶಯದ ನುಡಿಗಳು ಪಾಣಜೆ ಓಡ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ವ್ಯಕ್ತಗೊಂಡವು ಸರಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಲ್ಲಿನ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವಿದ್ಯಾರ್ಥಿಗಳಿಂದ ಸಭಾಂಗಣದ ಮುಂಭಾಗದಲ್ಲಿ ಮೇಜಿನ ಮೇಲೆ ಬೈ ಹುಲ್ಲಿನ ಚೆರುವಿನ ಮೇಲೆ ಮಡಿಕೆ ಉರಳಿ ಬೀಳದಂತೆ ಎಚ್ಚರವಹಿಸಿ ಮಡಿಕೆಗಳನ್ನು ಒಂದೊಂದು ಮಡಿಕೆಗೂ ಒಂದೊಂದು ಹೆಸರು ತಪತಿ ,ಕಾವೇರಿ, ನೇತ್ರಾವತಿ, ಗೋದಾವರಿ ಎಂಬ ವಿಶೇಷ ನದಿಗಳ ಹೆಸರನ್ನು ಬಿಂಬಿಸಿ ಮೇಲ್ಭಾಗಕ್ಕೆ ಬಟ್ಟಲು ಗ್ಲಾಸ್ ಮುಚ್ಚಿಟ್ಟು ಕನ್ನಡಿ ಸ್ವಚ್ಛವಾಗಿದ್ದರೆ ಅದರ ಪ್ರತಿಬಿಂಬ ಸುಂದರವಾಗಿ ಕಾಣುತ್ತದೆ ಅದೇ ರೀತಿ ಮನಸ್ಸು ಸ್ವಚ್ಛವಾಗಿದ್ದರೆ ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ .

ನೀರು ಶುಭ್ರವಾಗಿದ್ದಾಗ ಪ್ರತಿಬಿಂಬ ಸುಂದರ ಹಾಗೆ ಮನಸ್ಸು ಪರಿಶುದ್ಧವಾಗಿದ್ದಾಗ ಇತರರು ಪರಿಪೂರ್ಣವಾಗಿ ಕಾಣುತ್ತಾರೆ ಹನಿ ಹನಿ ನೀರು ಅಮೂಲ್ಯ ಒಂದೊಂದು ಹನಿಯಾಗಿ ನೀರು ಬೀಳುತ್ತಿದ್ದರು ಒಂದಾನೊಂದು ಕಾಲಕ್ಕೆ ಗಡಿಗೆಯ ತುಂಬಾ ನೀರು ತುಂಬಿಕೊಳ್ಳುತ್ತದೆ.

ಬರಹ: ಕುಮಾರ್ ಪೆರ್ನಾಜೆ