ಮಂಗಳೂರು, ಮೇ 9: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣಕನ್ನಡ ಜಿಲ್ಲಾಉಸ್ತುವಾರಿ ಸಚಿವ  ದಿನೇಶ್‍ ಗುಂಡೂರಾವ್  ಮೇ 10 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.

ಮೇ 10 ರಂದು ಬೆಳಿಗ್ಗೆ  6:55 -ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಆಗಮನ, 7:25  ಸಕ್ರ್ಯೂಟ್ ಹೌಸ್ ಆಗಮನ,  8-   ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಉದ್ಘಾಟನಾ ಕಾರ್ಯಕ್ರಮದ ಪೂರ್ವಭಾವಿ ಸಭೆ, 9:30-  ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ, 10 - ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ, ಮಧ್ಯಾಹ್ನ  3:25  ಮಂಗಳೂರು ವಿಮಾನ ನಿಲ್ದಾಣದಿಂದ  ಬೆಂಗಳೂರಿಗೆ ಸಚಿವರು ತೆರಳಲಿದ್ದಾರೆ.