ಮಂಗಳೂರು:  ತುಳು ಚಿತ್ರರಂಗದ ಸುವರ್ಣ ಮಹೋತ್ಸವದ ಈ ವರುಷದಲ್ಲಿ ತಮ್ಮ ಲಕ್ಷ್ಮಣ ಅವರು ಬರೆದ ತುಳು ಚಿತ್ರ ಮಾಲಾ ಕಾರ್ಯಕ್ರಮವು ಮಂಗಳೂರಿನ ಪುರ ಭವನದಲ್ಲಿ ಫೆಬ್ರವರಿ 27ರಂದು ನಡೆಯಿತು.

ಈ ಸಂದರ್ಭದಲ್ಲಿ ತೆರೆ ಕಂಡಿರುವ ಚಿತ್ರಗಳ ಬಗೆಗೆ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಇನ್ನಿತರ ಪ್ರದರ್ಶನಗಳು ಮತ್ತು ತುಳು ಸಿನಿಮಾ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.

ದೀಪ ಬೆಳಗಿ ಉದ್ಘಾಟಿಸಿದ ಬೆದ್ರದ ಮೋಹನ್ ಆಳ್ವ ಅವರು ತಮ್ಮ ಲಕ್ಷ್ಮಣ ಅವರ ಪ್ರಾಮಾಣಿಕ ರಂಗ ಮತ್ತು ತುಳು  ಚಿತ್ರ ರಂಗದ ಸೇವೆಯು ಶ್ಲಾಘನೀಯ ಎಂದರು. ತುಳು ಬೆಳ್ಳಿ ತೆರೆಯ ಸುವರ್ಣ ಯಾನ ಪುಸ್ತಕವನ್ನು ಪ್ರೊ. ವಿವೇಕ ರೈ ಅವರು ಬಿಡುಗಡೆ ಮಾಡಿದರು. ಈ ಪುಸ್ತಕಕ್ಕೆ ಡಿಲಿಟ್ ಕೊಡಬೇಕು ಎಂದು ವಿವೇಕ ರೈ ಕೇಳಿಕೊಂಡರು.

ಮಂಗಳೂರು ವಿವಿಯ ಉಪಕುಲಪತಿ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಚಿನ್ನಾ ಕಾಸರಗೋಡು ಪ್ರಾಸ್ತಾವಿಕ ಮಾತನಾಡಿದರು.