ಮಂಗಳೂರು:  ಬದ್ರಿಯಾ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಬಜಾಲ್ ನಂತೂರು ಇದರ ಆಶ್ರಯದಲ್ಲಿ ರವಿವಾರ  ಬೃಹತ್ ಸ್ವಲಾತ್ ವಾರ್ಷಿಕ ಮತ್ತು ಸಮಾರೋಪ ಸಮಾರಂಭ ಮಸೀದಿಯ ವಠಾರದಲ್ಲಿ ಜರಗಿತು.

ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಜಮಾಅತ್ ನಲ್ಲಿ ಒಗ್ಗಟ್ಟಿದ್ದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಭಿನ್ನಾಭಿಪ್ರಾಯ ಬದಿಗಿಟ್ಟು  ಸಮುದಾಯದ ಏಳಿಗೆ ಬಗ್ಗೆ ಚಿಂತುಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಡ ಕುಟುಂಬಗಳನ್ನು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮೇಲೆತ್ತಲು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಭಾಗ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದ  ಪ್ರದೇಶವಾಗಿದ್ದು,  ಸಮಾಜದ ಕಟ್ಟಕಡೆಯ ವ್ಯಕ್ತಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಜಮಾಅತ್ ಕಮಿಟಿಯಡಿ ಆಂಗ್ಲ ಮಾಧ್ಯಮ ಶಾಲೆ, ಹೈಯರ್ ಸೆಕೆಂಡರಿ ಮದ್ರಸವನ್ನು ಸ್ಥಾಪಿಸಲಾಗಿದ್ದು, ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಜಮಾಅತಿನ ಅಭಿವೃದ್ಧಿಗೆ ಎಲ್ಲರೂ ಸೌಹಾರ್ದತಯಿಂದ ಕೆಲಸ ನಿರ್ವಹಿಸಬೇಕಾಗಿದೆ  ಎಂದು ಹೇಳಿದರು.

ಕೆಪಿಸಿಸಿ ಪ್ರ. ಕಾರ್ಯದರ್ಶಿ ಇನಾಯತ್ ಅಲಿ,  ಮಾಜಿ ಜಿಲ್ಲಾ ವಕ್ಫ್ ಅಧ್ಯಕ್ಷ ಎಸ್.ಎಂ.ಆರ್. ರಶೀದ್ ಹಾಜಿ ಮಾತನಾಡಿದರು. ಬಿ.ಜೆ.ಎಂ ಖತೀಬ್ ಪಿ.ಎಸ್.ಮುಹಮ್ಮದ್ ಖಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.  ಉದ್ಯಮಿ ಹಾಜಿ ಶಾಕಿರ್ ಅಹ್ಮದ್ ಐಸಮ್, ಮರ್ಕಝ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಸಾಗರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಝೈನುದ್ದೀನ್, ಕಾರ್ಪೊರೇಟರ್ ಕೆ.ಇ.ಅಶ್ರಫ್, ಮಂಗಳೂರು ಕರಾವಳಿ ಅಲ್ಪಸಂಖ್ಯಾತ ಮೀನುಗಾರಿಕ ಸಂಘದ ಉಪಾಧ್ಯಕ್ಷ ಅಹ್ಮದ್ ಬಾವ, ಹಾಜಿ ಬಿ.ಎನ್.ಅಬ್ಬಾಸ್, ಎಚ್.ಎಸ್. ಹನೀಫ್, ಎಂ.ಎಚ್. ಮುಹಮ್ಮದ್ ಫೈಸಲ್ ನಗರ, ಅಶ್ರಫ್ ತೋಟ, ಇಕ್ಬಾಲ್ ಅಹ್ಸ್ ನಿ, ಅಬ್ದುಲ್ ಸಲಾಂ, ಹಕೀಂ ಮದನಿ, ಅಬ್ದುಲ್ ರಹಿಮಾನ್ ಮದನಿ, ಅಬೂಬಕ್ಕರ್ ಸಖಾಫಿ, ಅಬ್ದುಲ್ ಹಮೀದ್, ಮುಹಮ್ಮದ್ ಹನೀಫ್ ಕೆಳಗಿನಮನೆ, ಹಸನಬ್ಬ ಮೋನು, ಯೂಸುಫ್ ಕುಂಬ್ಳಳಿಕೆ, ಅಬ್ಬಾಸ್ ಶಾಂತಿನಗರ, ಅಬ್ದುಲ್ ರವೂಫ್ ಫೈಸಲ್ ನಗರ, ನಝೀರ್ ಪಾಂಡೇಲ್, ಮುಹಮ್ಮದ್ ಹನೀಫ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ನಡೆದ ಸ್ವಲಾತ್ ಮಜ್ಲಿಸ್ ಗೆ ಅಸ್ಸಯ್ಯದ್ ಅಬೂಬಕ್ಕರ್ ಸಿದ್ದೀಖ್ ತಂಙಳ್ ಮುರ ಅವರು ನೇತೃತ್ವ ನೀಡಿ ದುಆ ನೆರವೇರಿಸಿದರು. ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬೂಬಕ್ಕರ್ ಮುಸ್ಲಿಯಾರ್ ಕುಕ್ಕಾಜೆ ಸ್ವಾಗತಿ, ಕಾರ್ಯಕ್ರಮ ನಿರೂಪಿಸಿದರು.