ಸ್ವಾತಂತ್ರ್ಯ ಪಡೆಯುವ ಕಾಲದಲ್ಲಿ ಮಂಗಳೂರಿನಲ್ಲಿ ಆರಂಭವಾದ ರಾಮಕೃಷ್ಣ ಮಠ ಮತ್ತು ಮಿಶನ್‌ನ ಅಮೃತ ಮಹೋತ್ಸವ ಸಮಾರಂಭವನ್ನು ಜೂನ್ 3 ಮತ್ತು 4ನೇ ದಿನಾಂಕಗಳಲ್ಲಿ ಹಮ್ಮಿಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

125 ವರುಷಗಳ ಹಿಂದೆ 1897ರಲ್ಲಿ ಸ್ವಾಮಿ ವಿವೇಕಾನಂದರಿಂದ ಸ್ಥಾಪಿಸಲ್ಪಟ್ಟುದು ರಾಮಕೃಷ್ಣ ಮಹಾಸಂಘ ಸನ್ಯಾಸಿಗಳ ಸಂಘ. ಜೂನ್ 3ಕ್ಕೆ ಮಂಗಳೂರಿನಲ್ಲಿ ರಾಮಕೃಷ್ಣ ಮಠ ಸ್ಥಾಪನೆಯಾಗಿ 75 ವರುಷ.

ಮೊದಲ ದಿನ ಯುಗಾವತಾರಿ ಗೋಷ್ಠಿ, ನಾಯಕತ್ವ ಗೋಷ್ಠಿ, ಸರಳ ಬದುಕಿನ ಬಗೆಗೆ ಗೋಷ್ಠಿಗಳು ನಡೆಯುತ್ತವೆ. ಯತಿ ಪೂಜೆ, ಸಂಗೀತ ಸಂಧ್ಯಾ ಕಾರ್ಯಕ್ರಮ ನಡೆಯುತ್ತದೆ.

ಎರಡನೆಯ ದಿನ ರಾಮಕೃಷ್ಣ ಮಠ, ಯೋಗಿ ಪರಂಪರೆ, ಇತರ ಆಧ್ಯಾತ್ಮಿಕ ಗೋಷ್ಠಿಗಳು ನಡೆಯುತ್ತದೆ.

ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಕಾರ್ಯಕ್ರಮದ ವಿವರ ನೀಡಿದರು.

ಸ್ವಾಮಿ ಏಕಗಮ್ಯಾನಂದಜಿ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಮಠದ ದಿಲರಾಜ ಆಳ್ವ ಉಪಸ್ಥಿತರಿದ್ದರು.

ಜಿತಕಾಮಾನಂದಜಿ

ಮೊದಲು ಮಂಗಳೂರಿನಲ್ಲಿ ಮಠವು ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ಆರಂಭವಾಯಿತು. ಮುಂದೆ ದಾನಿಗಳ ನೆರವಿನಿಂದ ಈಗಿನ ಜಾಗಕ್ಕೆ ಬಂತು. ಇತ್ತೀಚೆಗೆ ರಾಮಕೃಷ್ಣ ಮಠವು ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಕೊಂಡಿದೆ. ಇತರ ನಾನಾ  ಸಾಮಾಜಿಕ ನಮ್ಮ ನಡೆ ಎಂದು ಜಿತಕಾಮಾನಂದಜಿ ಹೇಳಿದರು.

ಸ್ವಾಮಿ ಏಕಗಮ್ಯಾನಂದಜಿ ಮಾತನಾಡಿ 1951ರಲ್ಲಿ ರಾಮಕೃಷ್ಣ ಮಿಶನ್ ಆರಂಭವಾಯಿತು. ಆದ್ದರಿಂದ ಇದು ಮಠದ ಅಮೃತ ಮಹೋತ್ಸವವಾಗಿದೆ. ಈ ವಿಶೇಷವತೆಗೆ ಈಗಾಗಲೇ ದೇಶದ ನಾನಾ ಕಡೆಯ 400ಕ್ಕೂ ಹೆಚ್ಚು ಪ್ರತಿನಿಧಿಗಳು ಬರಲು ಸ್ಥಾನ ಕಾದಿರಿಸಿದ್ದಾರೆ. 75ರಷ್ಟು ಬೇರೆ ಬೇರೆ ಭಾಗದ ಯತಿಗಳು ಬರುತ್ತಾರೆ. ನಾವು ಬಡ ಮಕ್ಕಳಿಗೆ ಟ್ಯೂಶನ್ ನೀಡಿ ಅವರು ಉತ್ತಮ ಅಂಕದಿಂದ ಪಾಸಾಗುವಂತೆ ಮಾಡುತ್ತಿದ್ದೇವೆ. ಅದಕ್ಕೆ ಈಗ ಅಮೃತ ಭವನ ಕಟ್ಟಲಿದ್ದು ಆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬರುತ್ತಾರೆ. ಅಲ್ಲದೆ ಸ್ಥಳೀಯ ಸಂಸದ, ಶಾಸಕರು, ಇತರ ನಾಯಕರು ಹಾಜರಿರುವರು ಎಂದು  ಏಕಗಮ್ಯಾನಂದಜಿ ಹೇಳಿದರು.

ಮುಖ್ಯವಾಗಿ ಚಿಂತನ ಮಂಥನದಲ್ಲಿ ಸರಳ ಬದುಕಿನ ಬಗೆಗೆ ಗೋಷ್ಠಿಗಳು ಇರುತ್ತವೆ. ಎದುರು ರಸ್ತೆ ಅಗಲ ಮಾಡಲು ಜಾಗ ಬಿಟ್ಟುದರಿಂದ ಎದುರು ಕಾಂಪೌಂಡ್ ಮರು ರೂಪ ಪಡೆದಿದೆ. ಅದಕ್ಕೆ ಮಹಾನಗರ ಪಾಲಿಕೆ ಎಲ್ಲ ಸಹಕಾರ ನೀಡಿದೆ ಎಂದೂ ಅವರು ಹೇಳಿದರು.

ಏಕಗಮ್ಯಾನಂದಜಿ

ಮೇಯರ್ ಅವರು ಮಾತನಾಡಿ ಸಹಕಾರದ ಭರವಸೆ ನೀಡಿದರು.