ಬೆಂಗಳೂರಿನ ಗಾಂಧೀ ಭವನದಲ್ಲಿ ನಡೆಯುತ್ತಿದ್ದ ರೈತ ಸಭೆಗೆ ಜೈ ಮೋದಿ ಎಂದು ನುಗ್ಗಿದ ಭಾರತ ರಕ್ಷಣಾ ವೇದಿಕೆಯವರು ರೈತ ನಾಯಕರ ಮೇಲೆ ಮಸಿ ಎರಚಿ ಹಲ್ಲೆ ನಡೆಸಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಾಕೇಶ್ ಟಿಕಾಯತ್ ಮತ್ತು ರಾಜ್ಯದ ಚುಕ್ಕಿ ನಂಜುಂಡಸ್ವಾಮಿ, ಕವಿತಾ ಕುರುಕುಂದ ಮೇಲೆ ಮಸಿ ಚೆಲ್ಲಲಾಗಿದೆ. ದಾಳಿಕೋರರು ವೇದಿಕೆಯಲ್ಲಿದ್ದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಸಂಬಂಧ ಭಾರತ ರಕ್ಷಣಾ ವೇದಿಕೆಯ ಭರತ್ ಶೆಟ್ಟಿ, ಪ್ರದೀಪ್, ಶಿವಕುಮಾರ್ ಮೂವರನ್ನು ಹೈಗ್ರೌಂಡ್ಸ್ ಠಾಣೆಯ ಪೋಲೀಸರು ಬಂಧಿಸಿದರು.

ಅನಂತರ ಪತ್ರಿಕಾಗೋಷ್ಠಿ ನಡೆಸಿದ ಟಿಕಾಯತ್ ಅವರು, ನಾವು ಇಡೀ ದೇಶ ಸುತ್ತುವವರು. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.