ಜಾತಿ, ದೇಶ, ಭಾಷೆ ಬಿಟ್ಟು ಮುನ್ನಡೆದವರು ಶ್ರೀರಾಘವೇಂದ್ರ ಯತಿಗಳು.....ಯತಿಶ್ರೇಷ್ಠರೆಂದೇ ಪರಿಚಿತರಾದ ಪರಿಮಳಯುಕ್ತ ಶ್ರೀರಾಘವೇಂದ್ರ ಗುರುಸಾರ್ವಭೌಮರ 351 ನೇ ಆರಾಧನಾ ಮಹೋತ್ಸವವು ಅರಬ್ ರಾಷ್ಟ್ರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದು ವಿಶೇಷ ಸಂಗತಿ.
ಅಲ್ಲೋ ಇಲ್ಲೋ ಮನೆಗಳಲ್ಲಿ ಕೆಲವು ಜನಗಳಿಗೆ ಮಾತ್ರ, ಕೆಲವೊಮ್ಮೆ ಮನೆ ಮಂದಿಗಷ್ಟೇ ಸೀಮಿತವಾಗಿ ನಡೆಯುತ್ತಿದ್ದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಮೊದಲ ಬಾರಿಗೆ ಯುಎಇ ನಲ್ಲಿ ಆಯೋಜಿಸಲಾಗಿದೆ.
ಆಗಸ್ಟ್ ತಿಂಗಳ 14 ತಾರೀಕು ಉತ್ತರಾರಾಧನೆಯನ್ನು ಅಜ್ಮಾನ್ ಇಂಡಿಯನ್ ಅಸೋಸಿಯೇಷನ್ನಲ್ಲಿ ಭಕ್ತಿ ಶ್ರದ್ಧೆಯಿಂದ ಆಯೋಜಿಸಲಾಗಿದೆ.
ಧಾರ್ಮಿಕ ವಿಧಿಯಂತೆ ಆರಾಧನೆಯನ್ನು ಪೂರ್ತಿ ದಿವಸ ಅಚ್ಚುಕಟ್ಟಾಗಿ ನಡೆಸಿಕೊಡುವುದಕ್ಕೆ ಶ್ರೀಮಠದ ವತಿಯಿಂದ ದತ್ತಾತ್ರೆಯ ಜೋಶಿ ಗುರುಗಳು ಅವರ ಶಿಷ್ಯ ವೃಂದದ ಜೊತೆಗೆ ಆಗಮಿಸಲಿದ್ದಾರೆ.
ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವದ ವಿಶೇಷತೆಯನ್ನು ಹಾಗೂ ಸನಾತನ ಧರ್ಮದ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿಕೊಡಲು ಶತಾವಧಾನಿ ಆರ್ ಗಣೇಶ್ ರವರ ಪ್ರಿಯ ಶಿಷ್ಯರಾದ ಅರ್ಜುನ್ ಭಾರದ್ವಾಜ್ ಅವರು ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಯರ ಅಭಿಲಾಷೆಯಂತೆ ಆರಾಧನಾ ಮಹೋತ್ಸವವನ್ನು ಯುಎಇ ಯಲ್ಲಿ ಮೊದಲ ಬಾರಿಗೆ ನಡೆಸಿಕೊಡಲು ಪ್ರಮುಖ ಪಾತ್ರವಹಿಸುತ್ತಿರುವ ವಿಜಯ್, ಸದನ್ ದಾಸ್ ಹಾಗೂ ಮಧು ಇವರುಗಳ ಭಕ್ತಿಶ್ರದ್ಧೆಗೆ ಯುಎಇ ಗುರುರಾಯರ ಭಕ್ತ ವೃಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಕ್ತಿ ಶ್ರದ್ಧೆಯಿಂದ ನಡೆಯುತ್ತಿರುವ ಆರಾಧನ ಮಹೋತ್ಸವಕ್ಕೆ ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾಯರ ಸೇವೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿತ ಮಂಡಳಿಯಿಂದ ವಿಶೇಷ ಕೋರಿಕೆಯನ್ನು ಸಲ್ಲಿಸಲಾಗಿದೆ.
ವರದಿ.
- ವಿಜಯ.ಜಿ