ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕ, ಬೆಳುವಾಯಿ, ಇವರ ವತಿಯಿಂದ ವಿಧ್ಯಾ ನಿಧಿಯ ಅಂಗವಾಗಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಬೆಳುವಾಯಿಯ ಗುರುಮಂದಿರದಲ್ಲಿ ಜರುಗಿತು . ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶುಭಾ ಸುರೇಶ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು . ಕಾರ್ಯದರ್ಶಿ ಶ್ರೀಮತಿ ಸುಜಯ ಹರೀಶ್ ಸ್ವಾಗತಿಸಿ, ಶ್ರೀಮತಿ ಕುಶಲ ಸದಾಶಿವ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು ಕೋಶಾಧಿಕಾರಿ ಶ್ರೀಮತಿ ಅನುಷಾ ಸಂದೀಪ್ ಇವರು ಧನ್ಯವಾದ ನೀಡಿದರು .
ಸೇವಾ ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ, ಶ್ರೀಮತಿ ಪ್ರೀತಿಕಾ ರಘುರಾಜ್ ಇವರು ಅತಿಧಿಯಾಗಿ ಉಪಸ್ತಿತರಿದ್ದು ಹಿರಿಯ ಸದಸ್ಯರಾದ ಶ್ರೀಮತಿ ಸುಶೀಲಾ ಪರಂಬುಲ, ಶ್ರೀಮತಿ ಲಲಿತ ಸುವರ್ಣ ಇವರು ವೇದಿಕೆಯಲ್ಲಿ ಆಸೀನರಾಗಿದ್ದರು. ಹಾಗೂ ಮಹಿಳಾ ಘಟಕದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾಯ್ಯಕ್ರಮದ ಯಶಸ್ಪಿಗೆ ಶ್ರಮಿಸಿದರು. ಸಮಾಜದ ಮಕ್ಕಳು, ಹೆತ್ತವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು , ಕಾರ್ಯಕ್ರಮವು ಯಶನ್ವಿಯಾಗಿ ನೆರವೇರಿತು.