ಹೋಟೆಲಲ್ಲಿ ಚಾ ಕುಡಿದು ರಸ್ತೆ ಬದಿ ನಿಂತಿದ್ದ ವಲಸೆ ಕೂಲಿ ಕಾರ್ಮಿಕರ ಮೇಲೆ ಕಾರು ಹರಿದದ್ದರಿಂದ ಮೂವರು ಸತ್ತು, ಒಬ್ಬ ಗಾಯಗೊಂಡ ಘಟನೆ ಮೈಸೂರು ಮಂಗಳೂರು ಹೆದ್ದಾರಿಯಲ್ಲಿ ಅಡ್ಕಾರು ಎಂಬಲ್ಲಿ ನಡೆದಿದೆ.
40ರ ಚೆನ್ನಪ್ಪ ಲಮಾಣಿ, 51ರ ರೇಕಪ್ಪ ಮಲ್ಲದತ್, 53ರ ಮಾಲ್ತೇಶ್ ಗಂಗಪ್ಪ ಮರಣಿಸಿದವರು. 40ರ ವೆಂಕಪ್ಪ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಹುಣಸೂರಿನ ಮೂರ್ತಿ ಎನ್ನುವವರು ಮಗಳು ಮತ್ತು ಇನ್ನೊಬ್ಬರ ಜೊತೆಗೆ ಕಾರು ಓಡಿಸಿಕೊಂಡು ಮೂಡಬಿದಿರೆಗೆ ಬರುತ್ತಿದ್ದರು. ಅವರು ಅಪಾಯದಿಂದ ಪಾರಾಗಿದ್ದಾರೆ. ಸುಳ್ಯ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.