ಕರ್ನಾಟಕದಲ್ಲಿ ಮಳೆಯ ಹಾವಳಿ ಮತ್ತಷ್ಟು ವಿಸ್ತರಿಸಿದ್ದು ಬುಧವಾರ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರಿಬ್ಬರು ಮಳೆಗೆ ಬಲಿಯಾದರು.
ಬೆಂಗಳೂರಿನ ಉಲ್ಲಾಳು ಬಳಿ ಕಾವೇರಿ ಐದನೇ ಹಂತದ ಪೈಪ್ಲೈನ್ ಹಾಕುವ ನಡೆದಿದೆ. ಇಲ್ಲಿ ದುಡಿಯುತ್ತಿದ್ದ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಮತ್ತು ಬಿಹಾರದ ದೇವ ಭರತ್ ಎಂಬ ಕಾರ್ಮಿಕರು ದಿಢೀರ್ ಮಳೆಯ ಪ್ರವಾಹದಲ್ಲಿ ಸಿಲುಕಿ ಸಾವಿಗೀಡಾಗಿದ್ದಾರೆ.
ಬೆಂಗಳೂರಿನಲ್ಲಿ ಹಲವು ವಾಹನಗಳು, ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿರುವ ಮಳೆಯು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಅನಾಹುತ ಸೃಷ್ಟಿಸಿದೆ. ಬುಲ್ಡೋಜರನ್ನು ಸಹ ವೃಷಭಾವತಿ ನೀರು ಕೊಚ್ಚಿ ತಳ್ಳಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತಷ್ಟು ವಿಸ್ತೃತ ಪ್ರದೇಶದಲ್ಲಿ ಮಳೆ ಬೀಳುತ್ತಿದೆ.