ದೈವಜ್ಞ ಬ್ರಾಹ್ಮಣ ಸಮಾಜದ ಶ್ರೀ ಕ್ಷೇತ್ರ ಕರ್ಕಿ ಮಠದ ಟ್ರಸ್ಟಿ, ಸಮಾಜ ರತ್ನ ಗೌರವ ಪುರಸ್ಕೃತ, ಅಂಕೋಲಾದ ಕೆನರಾ ವೆಲ್ ಫೇರ್ ಟ್ರಸ್ಟ್ ನ ಗೋಖಲೆ ಸೆಂಟಿನರಿ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಪ್ರೊಫೆಸರ್ ವೆಂಕಟೇಶ್ ಆರ್, ವೆರ್ಣೇಕರ್ (76 ವರ್ಷ), ಅಂಕೋಲಾ ಇವರು ಶುಕ್ರವಾರ ತೀವ್ರ ಹೃದಯಾಘಾತದಿಂದ ನಿಧನರಾದರು. ಸರಳ ಸಜ್ಜನ ಆದರ್ಶ ವ್ಯಕ್ತಿಯಾಗಿದ್ದ ಇವರು ಶ್ರೀ ಕರ್ಕಿ ಮಠದ ಆಡಳಿತ ಮಂಡಳಿಯ ಸದಸ್ಯರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವ ಸಲಹೆಗಾರರಾಗಿ, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅಪಾರ ಜನಪ್ರಿಯರಾಗಿದ್ದ ಇವರ ಅಂತಿಮ‌ ದರ್ಶನಕ್ಕೆ ಹಲವು ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿ‌ ಅಶ್ರುತರ್ಪಣ ನೀಡಿದರು. ಇವರು ಪತ್ನಿ‌, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು  ಅಗಲಿದ್ದಾರೆ.