ಮೂಡುಬಿದಿರೆ: ಇಲ್ಲಿನ ಆದರ್ಶ ಜನರಲ್ ಸ್ಟೋರ್, ಬೇಕರಿಯ ಪಾಲುದಾರ, ಪತ್ರಿಕಾ ವಿತರಕ ಜಿ.ರಾಧಾಕೃಷ್ಣ ಶೆಣೈ (54 ವ) ಅಲ್ಪ ಕಾಲದ ಅಸೌಖ್ಯದಿಂದ ಸೆ 7 (ಬುಧವಾರ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅವರು ಮಾಜಿ ಪುರಸಭಾ ಸದಸ್ಯ ಜಿ.ವಿವೇಕಾನಂದ ಶೆಣೈ ಅವರ ಸಹೋದರ. ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಮೊದಲಾದ ಗಣ್ಯರು ಗುರುವಾರ ಜಿ.ವಿ.ಪೈ ನಗರ, ಲಾವಂತ ಬೆಟ್ಟು ರಸ್ತೆ ಪರಿಸರದಲ್ಲಿರುವ ಮೃತರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಚಿತ್ರ: ರಾಧಾಕೃಷ್ಣ ಶೆಣೈ