ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ದ.ಕ.ಜಿಲ್ಲಾ ಪಂ. ಶಾಲಾ ಶಿಕ್ಷಣ ಇಲಾಖೆ, ರೋಟರಿ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ 14 ,17 ವರ್ಷದ ಒಳಗಿನ ಶಾಲಾ ಮಕ್ಕಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ರೋಟರಿ ಶಾಲೆಯಲ್ಲಿ ನಡೆಯಿತು. ರೋಟರಿ ಎಜುಕೇಷನ್ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ ಎಂ, ಅಧ್ಯಕ್ಷತೆ ವಹಿಸಿದ್ದರು.ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ ಜಿ ಪಂದ್ಯಾಟ ಉದ್ಘಾಟನೆ ಮಾಡಿದರು. 

ರೋಟರಿ ಕಾರ್ಯದರ್ಶಿ ಎ.ಕೆ.ರಾವ್ ಟ್ರೋಫಿ ಅನಾವರಣ ಗೈದರು. ವೇದಿಕೆಯಲ್ಲಿ ದ.ಕ.ಜಿಲ್ಲಾ  ಉಪನಿರ್ದೇಶಕರು ವೆಂಕಟೇಶ್ ಸುಬ್ರಾಯ ಪಠಗಾರ್, ದೈಹಿಕ ಶಿಕ್ಷಣ ನಿರ್ದೇಶಕ ಭುವನೇಶ್, ಬಿ.ಇ.ಒ. ವಿರೂಪಾಕ್ಷಪ್ಪ, ದೈಹಿಕ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ, ಸಂಚಾಲಕ ಪ್ರವೀಣ್ ಚಂದ್ರ ಜೈನ್, ಮು.ಶಿ. ತಿಲಕ ಅನಂತವೀರ ಜೈನ್, ಹಾಗೂ ಇತರರು ಹಾಜರಿದ್ದರು. ಸುಧೀರ್ ಕುಮಾರ್, ದೀಕ್ಷಿತ್, ಸುನಿತಾ ಪಂದ್ಯಾಟ ಸಂಯೋಜಕರಾಗಿ ಸಹಕರಿಸಿದ್ದರು.