ಮಂಗಳೂರು - ಇಲ್ಲಿನ ಅಂಬೇಡ್ಕರ್ ವೃತ್ತದ ಕೆ.ಎಂ.ಸಿ ಸಭಾಂಗಣದಲ್ಲಿ ದಿನಾಂಕ ಮೇ 29 ರ ಭಾನುವಾರ ವೈದ್ಯಕೀಯ ಗೋಷ್ಠಿಯಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ( ಮಿಶ್ರಪದ್ಧತಿ) ಹಾಗೂ ಮೂಲವ್ಯಾಧಿ ಕ್ಷಾರ ಚಿಕಿತ್ಸಕರಾದ ಡಾ ಸುರೇಶ ನೆಗಳಗುಳಿ ಇವರನ್ನು ಹಾರ ಶಾಲು ಪೇಟ ಸಹಿತವಾಗಿ ಕೆ ಎಂ ಸಿ ಯ ಪ್ರಾಧ್ಯಾಪಕ ಡಾ ಚಕ್ರಪಾಣಿಯವರಿಂದ ಸನ್ಮಾನಿಸಲಾಯಿತು.
ದೀಪ ಉರಿಸಿ ಉದ್ಘಾಟಿಸಿದ ಅಡಾ ಚಕ್ರಪಾಣಿಯವರು ಮಾತನಾಡುತ್ತಾ ಆಯುರ್ವೇ ಶಾಸ್ತ್ರ ಮತ್ತು ಆಯುಷ್ ಶಾಸ್ತ್ರಗಳ ಮೂಲ ತತ್ವಗಳು ಈಗ ಆಧುನಿಕ ವೈದ್ಯ ಪದ್ಧತಿಗೂ ಅನುಸರಣೀಯವಾಗಿದೆ.ಈಗ ಹಲವಾರು ಚಿಕಿತ್ಸಾ ಸಿದ್ಧಾಂತಗಳಲ್ಲಿ ಬಹಳ ಬದಲಾವಣೆಗಳಾಗಿವೆ.ಈರೀತಿ ಎಲ್ಲಾ ಪದ್ಧತಿಯ ವೈದ್ಯರ ಘಟನೆ ಒಂದು ಉತ್ತಮಸೌಹಾರ್ದದ ಸಂಕೇತ. ಹಾಗೆಯೇ ಎಲ್ಲರನ್ನೂ ಕಂಡು ಪರಸ್ಪರ ವಿಚಾರ ವಿನಿಮಯ ಮಾಡಲು ಸದವಕಾಶ ಎಂದರು
ಡಾ ಅನುರಾಗ ಶೆಟ್ಟಿಯವರು ಎಲ್ಲಾ ಪದ್ಧತಿಗಳೂ ಅದರದೇ ಆದ ವೈಶಿಷ್ಟ್ಯ ಹೊಂದಿವೆ.ಪರಸ್ಪರ ಸಂವಾದ ಉತ್ತಮ ಚಿಕಿತ್ಸೆ ಕೊಡಲು ಅನುಕೂಲಕರ ಎಂದರು
ಡಾಸನ್ಮಾನ್ ಕೆ ಎನ್ ರವರು ಸರಿಯಾದ ರೀತಿಯಲ್ಲಿ ಪರೀಕ್ಷೆ ಮಾಡಲು ಅಗತ್ಯವಾದ ತಂತ್ರ ಜ್ಞಾನಗಳ ಅವಶ್ಯಕತೆ ಯನ್ನು ಒತ್ತಿ ಹೇಳಿದರು
ಇದೇ ವೇಳೆ ಪುತ್ತೂರಿನ ಡಾ ರವಿಶಂಕರ ಪೆರುವಾಜೆ ಮತ್ತು ಡಾ ಹರಿಕೃಷ್ಣ ಪಾಣಾಜೆಯವರನ್ನೂ ಗೌರವಿಸಲಾಯಿತು.
ಗೋಷ್ಠಿಯ ಪ್ರಮುಖ ವೈದ್ಯರಾದ ಡಾ ಚಕ್ರಪಾಣಿ, ಉದರ ತಜ್ಞ ಡಾ ಅನುರಾಗ ಜೆ ಶೆಟ್ಟಿ ಹಾಗೂ ಮೂತ್ರ ಜನಕಾಂಗ ತಜ್ಞ ಡಾ ಸನ್ಮಾನ್ ಕೆ ಎನ್ ರವರು ವಿಶೇಷ ಉಪಾನ್ಯಾಸ ನೀಡಿದರು.
ಆಯುಷ್ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಡಾ ನಾರಾಯಣ ಅಸ್ರ, ಕಾರ್ಯದರ್ಶಿ ಡಾ ಶ್ರೀದೇವಿ ಕೈಕಂಬ ಮತ್ತು ಮಂಗಳೂರು ತಾಲೂಕು ಅಧ್ಯಕ್ಷ ಡಾ ಕೃಷ್ಣ ಎಂ ಗೋಖಲೆ ಮತ್ತು ಕಾರ್ಯದರ್ಶಿ ಡಾ ಸುಧೀಂದ್ರ ರಾವ್ ಇವರ ಸಾರಥ್ಯದಲ್ಲಿ ಕೆಎಂ.ಸಿ ಮಂಗಳೂರು ಜಂಟಿಯಾಗಿ ಈ ಕಾರ್ಯಕ್ರಮ ಯೋಜಿಸಿದ್ದರು.
ಡಾ ಪ್ರತಿಭಾ ರೈ ಯವರು ಪ್ರಾರ್ಥನೆ ಹಾಗೂ ನಿರೂಪಣೆ ಮಾಡಿದರು.
ಸುಮಾರು ಇನ್ನೂರು ವೈದ್ಯರು ಭಾಗವಹಿಸಿದ್ದ ಈ ಗೋಷ್ಠಿಯು ತಜ್ಞ ರೊಡನೆ ಸಂವಾದ ನಡೆಯಿತು.