ಶ್ರೀರಂಗಪಟ್ಟಣದ ಹಳೆಯ ಮಸೀದಿ ಕೆಡವಿ ರಾಮ ಮಂದಿರ, ಹನುಮಾಲಯ ಕಟ್ಟುವುದಾಗಿ ಪೋಸ್ಟ್ ಮಾಡಿದ ಕಡೂರು ತಾಲೂಕಿನ ದೇವನೂರು ಕಾಳಿ ಮಠದ ಋಷಿಕುಮಾರ ಸ್ವಾಮೀಜಿಯನ್ನು ಬಂಧಿಸಲಾಗಿದೆ.
ಮಸೀದಿಯ ಹಳೆಯ ಫೋಟೋ ಬಳಸಿ, ಇಲ್ಲಿ ರಾಮ ಮಂದಿರ ಕಟ್ಟುವ ಪೋಸ್ಟ್ ಮಾಡಿದ್ದರು. ಭಾರತ ಪುರಾತತ್ವ ಇಲಾಖೆಯ ನೌಕರ ಯತಿರಾಜ್ ದೂರು ನೀಡಿದ್ದರು. ಶ್ರೀರಂಗಪಟ್ಟಣ ಪೋಲೀಸರ ಸ್ವಾಮೀಜಿಯನ್ನು ಬಂಧಿಸಿ ವಿಚಾರಣೆಗೆ ಕರೆತಂದಿದ್ದಾರೆ.