ಪುತ್ತೂರು : ಭಾರತ ಹಲವು ಸಂಸ್ಕೃತಿಗಳ, ಭಾಷೆಗಳ ವೈವಿದ್ಯಮಯ ನಾಡು. ತುಳು ಪಶ್ಚಿಮ ಕರಾವಳಿ ಭಾಗದ ಒಂದು ಭಾಷೆ. ಇದು ಸಂವನಕ್ಕಷ್ಟೇ ಸೀಮಿತವಾಗಿಲ್ಲ. ಈ ನೆಲದ ಅಸ್ಮಿತೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಮತ್ತು ಜಾನಪದ ವಿದ್ವಾಂಸರಾದ ಶ್ರೀ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಅವರು ಪುತ್ತೂರಿನ ಸಂತಫಿಲೋಮಿನಾ ಕಾಲೇಜಿನ “ಫಿಲೋ ಬೊಳ್ಳಿ” ತುಳು ಸಂಘದ ಕಾರ್ಯಚಟುವಟಿಕೆಗಳನ್ನು ಸಾಂಪ್ರದಾಯಿಕ ಬಗೆಯಲ್ಲಿ ತೆಂಗಿನ ಸಿಂಗಾರ ಅರಳಿಸಿ ಉದ್ಘಾಟಿಸುತ್ತ ಮಾತನಾಡುತ್ತಿದ್ದರು.
ತುಳು ಭಾಷೆ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ದಕ್ಷಿಣ ಭಾರತದ ಬೇರೆ ಬೇರೆ ಪ್ರಾಚೀನ ಭಾಷಾ ಪ್ರಬೇಧಗಳಿವೆ. ಅವೆಲ್ಲವುಗಳ ಹಲವು ಪ್ರಭಾವಗಳನ್ನು ತುಳುವಿನಲ್ಲಿಯೂ ಕಾಣಬಹುದು. ಕರಾವಳಿಯ ಪ್ರದೇಶದಲ್ಲಿ ಬೇರೆ ಬೇರೆ ಧರ್ಮ, ಜಾತಿಯವರಿದ್ದರೂ ಅವರೆಲ್ಲರೂ ತುಳುವನ್ನು ಸಂವಹನ ಭಾಷೆಯಾಗಿ ಒಪ್ಪಿಕೊಂಡಿದ್ದಾರೆ. ಹಲವರ ಮನೆ ಮಾತು ತುಳು. ಎಲ್ಲರನ್ನು ತುಳು ಬೆಸೆದಿದೆ. ಹಾಗಾಗಿ ತುಳು ಇಲ್ಲಿಯ ಸಂಸ್ಕ್ರುತಿ. ನೆಲೆದ ಬದುಕಿನ ಪ್ರತೀಕ. ಆದರೆ ಆಧುನಿಕ ಜೀವನದಲ್ಲಿ ತುಳು ಭಾಷೆ ಸ್ರಗುತ್ತಿದೆ. ಅದರ ಸೊಗಡನ್ನು, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಂಘಟನಾತ್ಮಕ ಕಾರ್ಯಗಳ ಅಗತ್ಯ ಇದೆ ಎಂದು ಶ್ರೀ ಭಾಸ್ಕರ ರೈ ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ರಂಗ ಕಲಾವಿದ ಶ್ರೀ ಸುಂದರ ರೈ ಅವರು ತುಳು ಭಾಷೆ ಅತ್ಯಂತ ಶಕ್ತಿ ಶಾಲಿಯಾದದ್ದು. ಜನ ಜೀವನದಲ್ಲಿ ಸಹಜವಾಗಿ ಮಿಳಿತಗೊಂಡ ತುಳು ಭಾಷೆ ರಂಗಸ್ಥಳದಲ್ಲಿ ಅದ್ಭುತವಾಗಿ ಪ್ರಕಟಗೊಳ್ಳುತ್ತದೆ. ಹಾಗಾಗಿಯೇ ತುಳು ರಂಗ ಭೂಮಿ ಆಧುನಿಕ ಕಾಲ ಘಟ್ಟದಲ್ಲಿ ಇನ್ನೂ ಉಳಿದುಕೊಂಡಿದೆ. ತುಳು ಸಿನೆಮಾ ಮತ್ತು ನಾಟಕಗಳು ಭಾಷೆಯನ್ನು ಉಳಿಸಲು ನೆರವಾಗಿವೆ. ಸಾಮರಸ್ಯದ ಬದುಕು ಸದಾ ಸುಂದರ. ಎಲ್ಲರೂ ಮಾತನಾಡುವ ತುಳು ಅಂಥ ಸಾಮರಸ್ಯವನ್ನು ಗಟ್ಟಿಗೊಳಿಸುವ ಅತ್ಯಂತ ಸಮರ್ಥ ಭಾಷೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಂ|ಡಾ|ಎಂಟೋನಿ ಪ್ರಕಾಶ್ ಮಂತೆರೋÁವರು ಸಾಹಿತ್ಯ ಸಾಂಸ್ಕೃತಿಕ ಆಚರಣೆಗಳಿಗೆ ಜಾತಿ ಮತ್ತು ಧರ್ಮದ ಬಂಧನ ಇರಬಾರದು. ಈ ಎಲ್ಲ ಬಂಧನಗಳನ್ನು ಮೀರಿ ನಾವು ಆಲೋಚಿಸುವ ಅಗತ್ಯವಿದೆ. ತುಳು ಭಾಷೆ ಅನ್ನುವುದು ಇದಕ್ಕೆ ಪೂರಕ. ತುಳು ಆಡುವ ನೆಲದಿಂದ ದೂರದ ಇನ್ನೊಂದು ರಾಜ್ಯಕ್ಕೆ, ಅಥವಾ ರಾಷ್ಟ್ರಕ್ಕೆ ಹೋದಾಗ ತುಳುವಿನ ದನಿ ಕೇಳಿದರೆ ಸಾಕು, ಅದು ನೀಡುವ ಖುಷಿಯ ಅನುಭವ ಅನನ್ಯ ಮತ್ತು ಅದು ಭಾಷೆ ನಮಗೆ ಅರಿವಿಲ್ಲದಂತೆ ಮನದ ಆಳದಲ್ಲಿ ಎಷ್ಟು ಆಳವಾಗಿ ನೆಲೆಯಾಗಿರುತ್ತದೆ ಎನ್ನುವುದರ ಪ್ರತೀಕ ಎಂದು ನುಡಿದು ಸಂಘದ ಚಟುವಟಿಕೆಗಳಿಗೆ ಶುಭ ಹಾರೈಸಿದರು. ನಿ ಪೂವರಿ ಪತ್ರಿಕೆಯ ಸಂಪಾದಕ ಶ್ರೀ ವಿಜಯ ಕುಮಾರ್ ಬಂಡಾರಿ ಹೆಬ್ಬಾರ ಬೈಲು, ತುಳು ಕವಿ ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ತುಳು ಅಭಿಮಾನಿಗಳು ಉಪಸ್ಥಿತರಿದ್ದರು.
ತುಳು ಸಂಘದ ಸಂಯೋಜಕಿ ಶ್ರೀಮತಿ ದೀಪಿಕಾ ಸನಿಲ್ ಸ್ವಾಗತಿಸಿದರು. ವಾಣಿಜ್ಯ ವ್ಯವಹಾರ ವಿಭಾಗ ಮುಖ್ಯಸ್ಥರಾದ ಡಾ|ರಾಧಾಕೃಷ್ಣ ಗೌಡ ಪ್ರಸ್ತಾವಿಸಿದರು. ತುಳು ಸಂಘದ ವಿದ್ಯಾರ್ಥಿಗಳ ತಂಡ ಪ್ರಾರ್ಥಿಸಿ, ಪೆÇ್ರ.ಪ್ರಶಾಂತ್ ರೈ ವಂದಿಸಿದರು. ವಾಣಿಜ್ಯ ಪ್ರಾಧ್ಯಾಪಕ ಪೆÇ್ರ. ದಿನಕರ ಆಂಚನ್ ಕಾರ್ಯಕ್ರಮವನ್ನು ನಿರ್ವಹಿಸಿದರು.
*****************