ಪುತ್ತೂರು ತಾಲೂಕಿನ ಮುಂಡೂರು ಕಂಪದ 23ರ ಯುವತಿ ಜಯಶ್ರೀ ಎಂಬವರನ್ನು ಮನೆಯಂಗಳದಲ್ಲಿ ಇರಿದು ಕೊಲೆ ಮಾಡಲಾಗಿದೆ.

Image Credit: iStock

ದಿವಂಗತ ಗುರುವ ಮತ್ತು ಗಿರಿಜಾರ ಮಗಳು ಜಯಶ್ರೀ ಒಬ್ಬಳೇ ಮನೆಯಲ್ಲಿ ಇದ್ದಾಗ ಈ ದುಷ್ಕೃತ್ಯ ನಡೆದಿದೆ. ನೆರೆಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗಿರಿಜಾ ಮಗಳ ಕೂಗಾಟ ಕೇಳಿ ಓಡಿ ಬಂದಿದ್ದಾರೆ. ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಯಲ್ಲಿ ಆಕೆಯ ಪ್ರಾಣ ಹೋಗಿದೆ.

ಕನಕಮಜಲಿನ ಉಮೇಶ್ ಎಂಬವನು ಮಗಳನ್ನು ಬಯಸಿದ್ದ. ಮನೆಗೂ ಬರುತ್ತಿದ್ದ. ಆತನ ದುರಭ್ಯಾಸ ಕಂಡು 2022ರಲ್ಲಿ ಜಯಶ್ರೀ ಆತನನ್ನು ತಿರಸ್ಕರಿಸಿದ್ದಳು. ಆತನೇ ಈ ಕೊಲೆ ಮಾಡಿರಬಹುದು ಎಂದು ತಾಯಿ ದೂರು ನೀಡಿದ್ದಾರೆ.

ಪೋಲೀಸು ಜಿಲ್ಲಾ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಾಯಿಯ ದೂರಿನಂತೆ ಪ್ರಕರಣ ದಾಖಲಿಸಿ ಕೊಂಡಿರುವುದಾಗಿಯೂ ತಿಳಿಸಿದ್ದಾರೆ.