ಯೋಧನಾಗಿ‌ ಮೂಡಬೇಕುಗಡಿಯಕಾಯಲು..

ಕೆಚ್ಚಿನಿಂದಕಾದಬೇಕು‌ ಸಮರಗೆಲ್ಲಲು..

ದೈರ್ಯದಿಂದ‌ ತೊಡೆಯಬೇಕು‌‌ ಸೆರೆಯ‌ ಕ್ಷಾಮವ..

ಸಾವಿನಲ್ಲುಸವಿಯಬೇಕುರಾಷ್ಟ್ರಪ್ರೇಮವ..


ರೈತನಾಗಿಜನಿಸಬೇ‌ಕು‌ ಹಸಿರ‌ ಸಿರಿಯಲಿ..

ದೈತ್ಯನಾಗಿಬೆಳೆಯಬೇಕುಕೃಷಿಯಕಡಲಲಿ..

ತಾಯಿಯಂತೆತುತ್ತನೀಡು‌ ಜಗದ‌ ಜೀವಿಗೆ..

ನಿನ್ನ‌ ಸೇವೆಸಲ್ಲಬೇಕು ಈ‌ ಪುಣ್ಯಭೂಮಿಗೆ..


ಗುರುವಾಗಿಮಾಡಬೇಕುಪಾಠಬೋಧನೆ..

ಒಳ್ಳೆತನದಿಅರಿಯಬೇಕುಮನದವೇದನೆ..

ಎಂದೆಂದಿಗೂಮಾಡದಿರುಪರರನಿಂದನೆ ..

ಜಗವೆಹಾಡಿಹೊಗಳುವುದುನಿನ್ನಸಾಧನೆ..


ವೈದ್ಯನಾಗಿಗಮನನೀಡುರೋಗಿ‌ ಸೇವೆಗೆ..

ದೇವರಂತೆಕಾಣುನೀನುಅವರಪಾಲಿಗೆ..

ನ್ಯಾಯ-ನೀತಿ-ಧರ್ಮದಿಂದಮಾಡುಕಾಯಕ..

ಆಗಬಲ್ಲೆಗಾಂಧಿಯಂತಮೇರು‌ ನಾಯಕ..


ನಯನ್‌ ಕುಮಾರ್‌

ಅಂತಿಮ ಬಿಎ, ವಿಶ್ವವಿದ್ಯಾನಿಲಯಕಾಲೇಜು‌ ಮಂಗಳೂರು