ಕಲ್ಯಾಣಪುರ: ದಿನಾಂಕ 9.4.2020 ರಂದು ಶ್ರೀಕೃಷ್ಣ ಬಾಲನಿಕೇತನ ಟ್ರಸ್ಟ್ ಕುಕ್ಕಿಕಟ್ಟೆ ಪ್ಲಾನೆಟ್ ಮಾಸ್ ಫೌಂಡೇಷನ್ ಕಲ್ಯಾಣಪುರ ಇಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕೋವಿಡ್ 19 ಬಗ್ಗೆ ಪಾಲನಾ ಸಂಸ್ಥೆಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಿಗೆ ಶೀತ ಕೆಮ್ಮು ಜ್ವರ ಇತ್ಯಾದಿ ಲಕ್ಷಣಗಳು ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಯಿತು .ಅಲ್ಲದೆ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆಯೂ ನಿಗವಹಿಸಬೇಕು ಹಾಗೂ ಸಂಸ್ಥೆಯ ಸುತ್ತ ಮುತ್ತ ವಾರಕ್ಕೊಮ್ಮೆ ಕ್ರಿಮಿನಾಶಕವನ್ನು ಸಿಂಪಡಿಸುವಮೂಲಕ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಯಿತು .ಯೋಗೀಶ್ ಔಟ್ ರೀಚ್ ವರ್ಕರ್ ಬಾಲನಿಕೇತನ ಸಂಸ್ಥೆಯ ವಾರ್ಡನ್ ಶಕುಂತಲಾ ಪ್ಲಾನೆಟ್ ಮಾಸ್ ಸಂಸ್ಥೆಯ ವಾರ್ಡನ್ ಗೀತಾ ಉಪಸ್ಥಿತರಿದ್ದರು .