ನಾ ಬಿಡುವೆ ಪದಗಳ ಬಾಣ
ಬಡಿಸುವೆ ಕವನಗಳ ಸಿಹಿ ಹೂರಣ
ನನ್ನಾಸೆಗೆ ಭಾಸ್ಕರ ನೀಡುವ
ಬೆಳಕಿನ ಚಿಲುಮೆಯ ಹೊಂಗಿರಣ
ದಿನಂಪ್ರತಿ ನಡೆಯುವುದು ಬೆಳಕು
ಭುವಿಯ ಸ್ನೇಹ ಸಮ್ಮಿಲನ
ಮುಗಿದು ಎಂದೂ ಕಡಲೂ
ತಂಗಾಳಿಯ ಭಾವ-ಬಂಧನ
ನಂಬಿಕೆಯ ನೀರು ಹಾಕಿ ಬೆಳೆಸಿದಷ್ಟು
ಸೊಂಪಾಗಿ ಬೆಳೆವುದು ಗೆಳೆತನವೆಂಬ ವನ
ಬರವಣಿಗೆಗೆ ಹಾತೊರೆಯಲೀ ನನ್ನೀ ಮನ
- By ಮಾಗಿದ ಮನಸ್ಸು