ನಾ ಬಿಡುವೆ ಪದಗಳ ಬಾಣ

ಬಡಿಸುವೆ ಕವನಗಳ ಸಿಹಿ ಹೂರಣ

ನನ್ನಾಸೆಗೆ ಭಾಸ್ಕರ ನೀಡುವ

ಬೆಳಕಿನ ಚಿಲುಮೆಯ ಹೊಂಗಿರಣ


ದಿನಂಪ್ರತಿ ನಡೆಯುವುದು ಬೆಳಕು

ಭುವಿಯ ಸ್ನೇಹ ಸಮ್ಮಿಲನ

ಮುಗಿದು ಎಂದೂ ಕಡಲೂ

ತಂಗಾಳಿಯ ಭಾವ-ಬಂಧನ


ನಂಬಿಕೆಯ ನೀರು ಹಾಕಿ ಬೆಳೆಸಿದಷ್ಟು

ಸೊಂಪಾಗಿ ಬೆಳೆವುದು ಗೆಳೆತನವೆಂಬ ವನ

ಬರವಣಿಗೆಗೆ ಹಾತೊರೆಯಲೀ ನನ್ನೀ ಮನ


- By ಮಾಗಿದ ಮನಸ್ಸು