ಶೃಂಗೇರಿ : ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿ, ಕೋಟೆಕಾರ್  ಶಾಖಾಮಠದಲ್ಲಿ ಶರನ್ನವರಾತ್ರಿಯ ಉದ್ಘಾಟನಾ ಸಮಾರಂಭ ನಡೆಯಿತು.  ಆಶಾ ಮಧುಸೂದನ ಆಯರ್ ಮತ್ತು ಮಧುಸೂದನ ಆಯರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಧರ್ಮಾಧಿಕಾರಿಗಳಾದ  ಬೊಳ್ಳವ ಸತ್ಯಶಂಕರ್ ಆಶೀರ್ವಚನ ನೀಡಿದರು ಡಾಕ್ಟರ್ ಸುಧೀರ್ ಹೆಗ್ಡೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷತ್ರಿಯ ಮರಾಠ ಪರಿಷತ್ತು ಬೆಂಗಳೂರು ಉಪಾಧ್ಯಕ್ಷರಾದ  ಸುರೇಶ್ ರಾವ್ ಕೆ ಲಾಡ್, ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ  ರವೀಂದ್ರ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿ ಕೊಪ್ಪಲು, ಸೀತಾರಾಮ ಖಜಾಂಜಿ ಡಾಕ್ಟರ್ ಮಾಧವಿ ವಿಜಯಕುಮಾರ್, ಅನಂತಕೃಷ್ಣ ಯಾದವ್,  ನಾರಾಯಣಿ ಸತ್ಯಶಂಕರ್ ಮೊದಲಾದವರು ಉಪಸ್ಥಿತರಿದ್ದರು. ಸರಯು ಬಾಲ ಯಕ್ಷ ವೃಂದ ಮಕ್ಕಳ ಮೇಳ ಕೊಡಿಕಲ್ ಮಂಗಳೂರು ಇವರು ಮಹಿಷಮರ್ದಿನಿ ಎಂಬ ಯಕ್ಷಗಾನ ಬಯಲಾಟವನ್ನು ನಡೆಸಿಕೊಟ್ಟರು.