ಹೆಬ್ರಿ :ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಸತ್ಯ ಹೇಳುವ, ಪ್ರಾಮಾಣಿಕ ರಾಜಕಾರಣಿ ಇದ್ದರೆ ದೇಶದಲ್ಲಿ ನಾನೂ ಮಾತ್ರ ಎಂದ ಮಧ್ವರಾಜ್.
ಸತ್ಯ ಹೇಳುವ, ಪ್ರಾಮಾಣಿಕ ರಾಜಕಾರಣಿ ಇದ್ದರೆ ದೇಶದಲ್ಲಿ ನಾನೂ ಮಾತ್ರ ಎಂದ ಮಧ್ವರಾಜ್ ಈ ತನಕ ಜನರ ಸೇವೆಯನ್ನು ಮಾಡಿದ್ದೇನೆ. ಓಟಿಗೋಸ್ಕರ ಸುಳ್ಳು ಹೇಳುವ ಅನಿವಾರ್ಯತೆ ಇಲ್ಲ, ಜನರೊಂದಿಗೆ ನಿರಂತರ ಇರುವ ಸಂಸದರು ನಿಮಗೆ ಬೇಕಾ ಅಪರೂಪಕ್ಕೆ ಬಂದು ಹೋಗುವ ಸಂಸದರು ಬೇಕಾ ಯೋಚಿಸಿ ಎಂದು ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಬುಧವಾರ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜನರ ಸೇವಕನಾಗಿ ದುಡಿಯುತ್ತೇನೆ , ಪ್ರಮೋದ್ ಮಧ್ವರಾಜ್.ಕೆಲಸ ಮಾಡುವ ಪ್ರಮೋದ್ ಬೇಕಾ ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ ನನ್ನನ್ನು ಗೆಲ್ಲಿಸಿ ಮುಂದಿನ 5 ವರ್ಷ ಎಲ್ಲರ ಉಳಿವಿಗಾಗಿ ನಿಮ್ಮ ಸೇವಕನಾಗಿ ದುಡಿಯುತ್ತೇನೆ ಎಂದು ಮಧ್ವರಾಜ್ ಹೇಳಿದರು.
ಉಡುಪಿ ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ. ಈಗಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಎಂಸ್ಯಾಂಡ್ ಬಿಸಿನೆಸ್ ಇದೆ. ಅದಕ್ಕೆ ಮರಳು ಸಿಗಲು ಬಿಡುತ್ತಿಲ್ಲ ಎಂದು ಎಲ್ಲರೂ ನನ್ನನ್ನು ದೂರುತ್ತಿದ್ದಾರೆ. ನನಗೆ ಮೀನಿನ ವ್ಯಾಪಾರ ಬಿಟ್ಟು ಬೇರೆ ಯಾವ ಬಿಸಿನೆಸ್ ಕೂಡ ಇಲ್ಲ. ಉಡುಪಿ ಜಿಲ್ಲೆಯ ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ, ಕೇಂದ್ರ ಸರ್ಕಾರದ ಕಠಿಣ ಮರಳು ನೀತಿಯಿಂದ ನಮ್ಮ ಜಿಲ್ಲೆ ಸಮಸ್ಯೆಯಾಗಿದೆ, ಇದರ ಬಗ್ಗೆ ಸಂಸದರು ತುಟಿ ಚಿಚ್ಚುತ್ತಿಲ್ಲ ಎಂದು ಪ್ರಮೋದ್ ಮಧ್ವರಾಜ್ ದೂರಿದರು.
ನಾನು ಸಚಿವನಾಗಿದ್ದಾಗ ಉಡುಪಿ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿದ್ದೆ ಮುಂದೆ ಲೋಕಸಭಾ ಕ್ಷೇತ್ರದ ಮಟ್ಟಿಗೆ ಸ್ವಾರ್ಥಿಯಾಗಿ ಜನಸೇವೆ ಮುಂದುವರಿಸುವೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಶೋಭಾ ಕರಂದ್ಲಾಜೆ ಮೌನ : ಹುಲಿ ಯೋಜನೆ ಜಾರಿ - ಗೋಪಾಲ ಭಂಡಾರಿ ಕೇಂದ್ರ ಅರಣ್ಯ ಪರಿಸರ ಸಚಿವರಾದ ಪ್ರಕಾಶ್ ಜಾವಡೇಕರ್ ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ,ನಳಿನ್ ಕುಮಾರ್ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿಯಾಗಿದೆ, ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ನರೇಂದ್ರ ಮೋದಿಯ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ, ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು. ಮೋದಿ ಕಳೆದ ವರ್ಷ ಹೇಳಿದ ಆಶ್ವಾಸನೆಯನ್ನು ಈಗ ಕೋಡುತ್ತಿಲ್ಲ, ಈ ವರ್ಷ ಹೊಸ ಸುಳ್ಳು ಶುರು ಮಾಡಿದ್ದಾರೆ, ಕಾಂಗ್ರೆಸ್ ದೇಶಕ್ಕೆ ಬಹಳಷ್ಟು ಕೊಟ್ಟಿದೆ, ಹೆಬ್ರಿ ತಾಲ್ಲೂಕು ಐತಿಹಾಸಿಕ ಕೊಡುಗೆ ನಮ್ಮ ನೇತ್ರತ್ವದಲ್ಲಿ ಕಾಂಗ್ರೆಸ್ ಕೊಟ್ಟಿದೆ ನಮಗೆ ಮತ ಕೇಳುವ ಹಕ್ಕು ಇದೆ. ನಮಗೆ ನಮ್ಮ ಜೊತೆಯಲ್ಲೇ ಖಾಯಂ ಇರುವ ಸಂಸದರು ಬೇಕು ಎಂದು ಗೋಪಾಲ ಭಂಡಾರಿ ಹೇಳಿದರು.
ಕ್ರಾಂತಿಕಾರಿ ಯೋಜನೆ : ಅಶೋಕದ ಕುಮಾರ್ ಕೊಡವೂರು - ರಾಹುಲ್ ಗಾಂದಿ ದೇಶದ ಜನರಿಗೋಸ್ಕರ ಬಡತನದ ಪ್ರತಿ ಕುಟುಂಬಕ್ಕೆ ವರ್ಷ 72 ಸಾವಿರ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಜನಪರ ಕಾಳಜಿ ಕಾಂಗ್ರೆಸ್ಸಿಗೆ ಮಾತ್ರ ಇದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಪ್ರಮೋದ್ ಮಧ್ವರಾಜ್ ಡೆಲ್ಲಿಗೆ ಹೋಗಬೇಕು : ಯೋಗೀಶ್ ಶೆಟ್ಟಿ.
ಈ ಸಲ ನಮ್ಮ ಓಟು ಮೋದಿಗೂ ಶೋಭಾಕ್ಕನಿಗೂ ಬೇಡ, ಪ್ರಮೋದ್ ಮಧ್ವರಾಜ್ ಡೆಲ್ಲಿಗೆ ಹೋಗಬೇಕು, ಅವರಿಗೆ ನೀವೆಲ್ಲ ಮತ ನೀಡಿ, ಕಾಂಗ್ರೆಸ್ ಜೆಡಿಎಸ್ ಉದ್ದೇಶ ಒಂದೇ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಕೆಲಸ ಮಾಡುವ ಜನನಾಯಕ ಮಧ್ವರಾಜರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಮೋದಿ - ಮಧ್ವರಾಜ್ ನಡುವೆ ಚುನಾವಣೆ ಅಲ್ಲ ! : ಈಗ ಉಡುಪಿ ಚಿಕ್ಕಮಗಳೂರು ಜನತೆಗೆ ಬದಲಾವಣೆಯ ಮೂಹೂರ್ತ ಬಂದಿದೆ, ಇದು ಮೋದಿ ಮಧ್ವರಾಜ್ ನಡುವಿನ ಚುನಾವಣೆಯಲ್ಲ, ಶೋಭಾ ಕರಂದ್ಲಾಜೆ - ಪ್ರಮೋದ್ ಮಧ್ವರಾಜ್ ನಡುವಿನ ಚುನಾವಣೆ, ಶೋಭಾ - ಮಧ್ವರಾಜ್ ಇಬ್ಬರಲ್ಲಿ ಯಾರೂ ಉತ್ತಮರು ಎಂದು ಯೋಚಿಸಿ ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಮನವಿ ಮಾಡಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಕ್ಷದ ಪ್ರಮುಖರಾದ ಎಚ್.ಶೀನಾ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಧ್ಯಕ್ಷ ಹೆಬ್ರಿ ಶ್ರೀಕಾಂತ್ ಪೂಜಾರಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಉಡುಪಿ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುದ್ರಾಡಿ ಸಂತೋಷ ಕುಮಾರ್ ಶೆಟ್ಟಿ ನಿರೂಪಿಸಿ ಎಚ್. ಜನಾರ್ಧನ್ ವಂದಿಸಿದರು.