ಮಂಗಳೂರು, ಮೇ 07: ಭೀಕರ ಕೊರೊನ ಸಂದರ್ಭದಲ್ಲಿಯೂ ಬೆಡ್ ಬ್ಲಾಕ್ ದಂದೆಯಲ್ಲಿ ಒಂದು ಕೋಮಿನ ವಿರುದ್ಧ ಸುಳ್ಳು ಆರೋಪ ಮಾಡಿ ಕೋಮು ವಿಷ ಬೀಜ ಬಿತ್ತುವ ಮುಲಕ ಶಾಂತಿಯುತ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮಾಜಿ ಸಚಿವ ಅಭಯಚಂದ್ರ ಜೈನ್ ಮತ್ತು ಯುವ ನಾಯಕ ಮಿಥುನ್ ರೈ ತೀವ್ರ ವಾಗ್ದಾಳಿ ಇಂದು ದಕ್ಷಿಣ ಕನ್ನಡ ಜಿಲ್ಹಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಚಿವರಾದ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಮಿಥುನ್ ರೈ ಅವರು ಜನ ಸಾಮಾನ್ಯರು ಅತ್ಯಂತ ಕಠಿಣ ದುಃಖದ ಕಠಿಣ ಪರಿಸ್ಥಿತಿಯಲ್ಲಿ ಇದ್ದು ಸರಕಾರ ಮತ್ತು ರಾಜಕಾರಣಿಗಳು ಜನ ಸಾಮಾನ್ಯರ ಕಷ್ಟದಲ್ಲಿ ಭಾಗಿಯಾಗಿ ತೊಂದರೆಗಳಿಗೆ ಸ್ಪಂದಿಸ ಬೇಕು. ಆದರೆ ಇದಕ್ಕೆಲ್ಲವು ವಿರುದ್ಧವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕ್ ದಂದೆಯ ಹೆಸರಲ್ಲಿ ಒಂದು ನಿರ್ಧಿಷ್ಟ ಕೋಮಿನ ಜನರನ್ನು ಗುರಿಯಾಗಿಸಿ ಸಮಾಜದಲ್ಲಿ ಕೋಮು ವಿಷ ಭಾವನೆ ಬಿತ್ತುವ ಮುಲಕ ಕೋಮು ಸಂಘರ್ಷಕ್ಕೆ ಎಡೆಮಾಡಿಕೋಡುವ ಹುನ್ನಾರ ನಡೆಸಿದ್ದು ಖಂಡನೀಯ, ತಕ್ಷಣ ತೇಜಸ್ವಿ ಸೂರ್ಯ ವಿರುದ್ಧ ಕ್ರಿಮಿನಲ್ ಪ್ರಕಾರಣ ದಾಖಲಿಸಲು ಆಗ್ರಹಿಸಿದರು