ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯ ಹಿಂದುಗಡೆಯ ಕೊಠಡಿಯಲ್ಲಿ ಯಡಿಯೂರಪ್ಪನವರ ಮಗ ವಿಜಯೇಂದ್ರ ಡೀಲ್ ಖಾನೆ ನಡೆಸಿದ್ದಾನೆ ಎಂದು ಬಿಜೆಪಿ ನಾಯಕ ಬಸವರಾಜ ಯತ್ನಾಳ ಆರೋಪಿಸಿದರು.

ಮೈಸೂರು ಚಾಮುಂಡಿ ಬೆಟ್ಟದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಪ್ರತಿದಿನ ನೂರು ಕೋಟಿ ನುಂಗಣ್ಣ ಮುಖ್ಯಮಂತ್ರಿ ಮಗ ಎಂದರು.

ಪ್ರತಿಪಕ್ಷಗಳು ಸತ್ತಿವೆ. ಕಾಂಗ್ರೆಸ್ ಏಕೆ ಯಡಿಯೂರಪ್ಪ ವಿರುದ್ಧ ಎದ್ದಿಲ್ಲ. ಅವರಿಗೂ ಭ್ರಷ್ಟಾಚಾರದಲ್ಲಿ ಪಾಲಿದೆ. ಶೋಭಾ ಡೆವಲಪರ್ಸ್‌ನಲ್ಲಿ ಯಾರ್ಯಾರು ಪಾಲುದಾರರು‌ ಎಂದು ತನಿಖೆ ಮಾಡಲಿ, ಇಡಿ ದಾಳಿ ಮಾಡಲಿ‌ ಎಂದು ಯತ್ನಾಳ ಕಾರವಾಗಿ ಹೇಳಿದರು.