ಬಂಟ್ವಾಳ: "ಧರ್ಮಸಭೆಯಲ್ಲಿ ಒಗ್ಗೂಡಿ ಮುನ್ನಡೆಯಲು, ಲೊರೆಟ್ಟೊ ಮಾತೆಯು ಸದಾ ನಮ್ಮೊಂದಿಗಿರಲು"ಎಂಬ ಧ್ಯೇಯವಾಕ್ಯದೊಂದಿಗೆ ಪ್ರಧಾನ ಧರ್ಮಗುರುಗಳಾದ ಮೂಡಬಿದಿರೆ ವಲಯದ ,ಪಾಲಡ್ಕ ಚರ್ಚಿನ ಧರ್ಮಗುರುಗಳಾದ ವಂದನೀಯ  ಎಲ್ಯಾಸ್ ಡಿಸೋಜಾ ಪ್ರವಚನ ನೀಡಿ ನೂರಾರು ಭಕ್ತಾದಿಗಳು ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ಧರ್ಮಗುರುಗಳೊಂದಿಗೆ ಪವಿತ್ರ ಬಲಿ ಪೂಜೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಯಿತು.ಡಿಸೆಂಬರ್ 1ರಿಂದ   ಒಂಬತ್ತು ದಿನಗಳ  ಮಾತೆ ಮರಿಯಮ್ಮನವರ ಚರಣಕ್ಕೆ ನೊವೆನಾ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಚರ್ಚ್ ಧರ್ಮಗುರುಗಳಾದ ವಂದನೀಯ ಪ್ರಾನ್ಸಿಸ್ ಕ್ರಾಸ್ತಾ ರವರು ಈ ಸಂಭ್ರಮವನ್ನು ಸಡಗರದಿಂದ ಆಚರಿಸಲು ಸಹಕರಿಸಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು .ಈ ಸಂದರ್ಭದಲ್ಲಿ ಹಬ್ಬವನ್ನು ಆಚರಿಸಲು ಸಹಕರಿಸಿದವರಿಗೆ ಗೌರವಪೂರ್ವಕವಾಗಿ ಮೇಣದ ಬತ್ತಿಯನ್ನು ನೀಡಿ ಸನ್ಮಾನಿಸಲಾಯಿತು. 

ಲೊರೆಟ್ಟೊ  ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ವಂದನೀಯ ಜೆಸನ್ ಮೋನಿಸ್ , ಬಂಟ್ವಾಳ ವಲಯ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯನ್ ಡಿಸೋಜ ಹಾಗೂ ಮಾಡಬಿದರೆ ವಲಯದ ಪ್ರಧಾನ ಧರ್ಮಗುರುಗಳಾದ ಪೌಲ್ ಸಿಕ್ವೇರಾ ಉಪಸ್ಥಿತರಿದ್ದರು.

ಕಳೆದ ಹಲವು ವರ್ಷಗಳಿಂದ ಸೇವೆ  ಸಲ್ಲಿಸಿದ್ದ  ಚರ್ಚ್ ವ್ಯಾಪ್ತಿಯ ವಾಳೆಗಳ ಗುುರ್ಕಾರ್ ರವರನ್ನು ಚರ್ಚ್  ಪಾಲನಾ ಮಂಡಳಿ  ವತಿಯಿಂದ ಸನ್ಮಾನಿಸಲಾಯಿತು.  ಚರ್ಚ್ ಪಾಲನಾ ಮಂಡಳಿ  ಸಂಭ್ರಮದ ಮೇಲುಸ್ತುವಾರಿಯನ್ನು ವಯಿಸಿತ್ತು