ಪುತ್ತೂರು: ಫೆಬ್ರವರಿ10:  ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ದೇಶಭಕ್ತ ಎನ್‌ ಎಸ್‌ ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಕಡಮಜಲು ಸುಭಾಷ್‌ ರೈಇವರು ತಮ್ಮ ಜನ್ಮ ದಿನದ ಸಂದರ್ಭದಲ್ಲಿ ಕಾಲೇಜಿನ ಕಂಪ್ಯೂಟರ್‌ ಶಿಕ್ಷಣ ನಿಧಿಗೆ ರೂಪಾಯಿ ಒಂದು ಲಕ್ಷ ಮೊತ್ತದ ಚೆಕ್‌ ಅನ್ನು ಸಂಸ್ಥೆಯ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೋ ರವರಿಗೆನೀಡಿದರು. ಕಡಮಜಲು ಸುಭಾಷ್‌ ರೈ ಯವರ ಸುಪುತ್ರ ಅಮೆರಿಕಾದಲ್ಲಿ ಉದ್ಯೋಗಸ್ಥರಾಗಿರುವ  ಶ್ರೀ ಕಡಮಜಲು ವಿಪುಲ್‌ ಎಸ್‌ ರೈಇವರು ತಮ್ಮತಂದೆಯವರು ವಿದ್ಯಾರ್ಜನೆ ಮಾಡಿದ ಸಂಸ್ಥೆಗೆ ದೇಣಿಗೆ ನೀಡಿ ಆದರ್ಶ ಮೆರೆದಿದ್ದಾರೆ.


 ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಗಜೀವನ್‌ ದಾಸ್‌ ರೈ, ಉಪಪ್ರಾಂಶುಪಾಲರಾದ ಪ್ರೊ| ಗಣೇಶ್‌ ಭಟ್‌, ಹಿರಿಯ ವಿದ್ಯಾರ್ಥಿಯಾದ ಶ್ರೀಜಯರಾಜ್‌ ಭಂಡಾರಿ ಮತ್ತು ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್‌ ಮೊಂತೆರೋರವರು ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಶ್ರೀಕಡಮಜಲು ಸುಭಾಷ್‌ ರೈ ಯವರು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಿ ರಾಜ್ಯ ಪ್ರಶಸ್ತಿಗೆ ಭಾಜನರಾಗಲಿ ಎಂದು ಶುಭಹಾರೈಸಿದರು.