ಮಂಗಳೂರು: ನಗರದ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಧ್ಯುಕ್ತ ಚಾಲನೆಯು ದೀಪ ಬೆಳಗಿಸುವುದರಮೂಲಕ ಪ್ರಾರಂಭಗೊಂಡಿತು . 

ಚೇರಮನ್ ,ಅರಿನ್ ಕ್ಯಾಪಿಟಲ್ ಚೇರ್ಮನ್ ,ಮಣಿಪಾಲ್ ಗ್ಲೋಬಲ್ ಎಜುಕೇಶನ್ ಇದರ  ಟಿ .ವಿ. ಮೋಹನದಾಸ್ ಪೈರವರು ನೆರವೇರಿಸಿದರು . ಪ್ರಾರಂಭದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಿತು . ಬಳಿಕ ಧ್ವಜಾರೋಹಣ , ವಂದೇಮಾತರಂ , ಗಣಹೋಮ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸಭಾಕಾರ್ಯಕ್ರಮ ನೆರವೇರಿತು. ಮಧ್ಯಾಹ್ನ ಮಹಾ ಪೂಜೆ ಸಾಯಂಕಾಲ ವಿವಿಧ ಸ್ಪರ್ಧೆಗಳ ವಿಜೇತರಿಗೆ  ಬಹುಮಾನ ವಿತರಣೆ ನಡೆಯಿತು. ಐದು ದಿನಗಳ ಪರ್ಯಂತ ವಿಶೇಷ ಕಾರ್ಯಕ್ರಮಗಳನ್ನು ಸಮಿತಿಯು ಆಯೋಜಿಸಿದ್ದು ಸಹಸ್ರಾರು ಭಜಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ . 

ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ , ವಿನೋದ್ ಶೆಣೈ, ರಘುವೀರ್ ಕಾಮತ್ , ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಸತೀಶ್ ಪ್ರಭು , ಆನಂದ ಪಾಂಗಳ , ಕೆ . ಪಿ . ಟೈಲಾರ್ , ಸುರೇಶ್ ಕಾಮತ್ , ಸ್ವಮಿಪ್ರಸಾದ್ ,ಯಸ್ ಆರ್ ಕುಡ್ವ , ಜೀವನರಾಜ್ ಶೆಣೈ ,ಅಭಿಷೇಕ್ ಭಂಡಾರಿ ,ನಂದನ್ ಮಲ್ಯ ,ಪೂರ್ಣಿಮಾ ಶೆಣೈ ,ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ,ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ , ಮಹಾಪೌರ ಸುಧೀರ್ ಶೆಟ್ಟಿ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು.