ಸದ್ಯ ಬೆಂಗಳೂರಿನ ಉದ್ಯಮಿ ಬೈಂದೂರು ಮುಂಬಯಿಯ ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರನ್ನು ಬಂಧಿಸಿರುವ ಅಪರಾಧ ವಿಭಾಗದ ಪೋಲೀಸರು 14 ದಿನಗಳ ವಶಕ್ಕೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಪತ್ರಕರ್ತರು ಅವರು ಗೊತ್ತು, ಇವರು ಗೊತ್ತು ಎಂದು ಹಣ ಪ(ಹೊ)ಡೆಯುವುದು ತುಂಬ ಹಳೆಯ ವಿಚಾರ. ಹಾಗೆಯೇ ಹೊಗಳುವುದಾಗಿ ಕಲೆಕ್ಷನ್, ತೆಗಳುವುದಾಗಿ ಬೆದರಿಸಿ ದೋಚುವುದೂ ಇದೆ. ಪತ್ರಕರ್ತರಿಗೆ ನೀಡುವ ಲೋಕದ ಅತ್ಯುನ್ನತ ಪುಲಿಟ್ಶರ್ ಪ್ರಶಸ್ತಿಗೆ ಮೂಲ ಹಣ ಹಳದಿ ಪತ್ರಿಕಾ ವ್ಯವಹಾರದ್ದು ಎಂಬುದು ಬ್ರಿಟಾನಿಕಾ ವಿಶ್ವಕೋಶದಲ್ಲಿ ಎಂದೋ ಬರೆಯಲಾಗಿದೆ.

ಎಲ್ಲ ಪತ್ರಕರ್ತರು ಹಾಗಿರುವುದಿಲ್ಲ. ಆದರೆ ಅತಿ ಮಾತನಾಡುವ ಪಟಾಲಂ ಕಟ್ಟಿಕೊಂಡಿರುವ ಚೈತ್ರಾ ಕುಂದಾಪುರ ಮಾದರಿಯ ಮರಿ ಪತ್ರಕರ್ತರು ಅಂತಾ ಕೆಲಸ ಮಾಡುತ್ತಾರೆ. ಎಬಿವಿಪಿ ಮೂಲದ ಚೈತ್ರಾ ಕುಂದಾಪುರ ಮತ್ತು ಆಕೆಯ ಸಹಚರರಾದ ನಾನಾ ಸಂಘ ಪರಿವಾರದ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ, ಆರ್. ಎಸ್. ಧನರಾಜ್, ರಮೇಶ್, ಶ್ರೀಕಾಂತ್ ಸದ್ಯ ಬಂಧನದಲ್ಲಿ ಇದ್ದಾರೆ. ಹಿರೇ ಹಡಗಲಿಯ ಹಾಲಸ್ವಾಮಿ, ಚನ್ನ ನಾಯ್ಕ್ ತಲೆ ಕರೆಸಿಕೊಂಡಿದ್ದಾರೆ. ಹುಡುಕಾಟ ನಡೆದಿದೆ.

ಹಿಂದೂ ಹೆಸರಿನಲ್ಲಿನ ಉಡುಪಿ ಆಲಯದ ಬಳಿಯೇ ಚೈತ್ರಾ ಮತ್ತಿಬ್ವರು ಸಿಕ್ಕಿಬಿದ್ದಿದ್ದಾರೆ. ಚೈತ್ರಾಳು ಮೊದಲು ಒಬ್ಬ ಮುಸ್ಲಿಂ ಮನೆಯಲ್ಲಿ ಅಡಗಿದ್ದಳು ಎಂದೂ ವರದಿಯಾಗಿದೆ. ಇವರೆಲ್ಲರೂ ಸಂಘ ಪರಿವಾರದ ನಾನಾ ಸಹ ಸಂಸ್ಥೆಗಳ ಕಾರ್ಯಕರ್ತರು. ವಂಚಿಸಿದವರು, ವಂಚಿತ ಸಹ ಸಂಘ ಪರಿವಾರದ ಸಖರು.

ಅವರು ಪಾಪದ ಹಿಂದೂ ಬೈಂದೂರು ಮೂಲದ ಗೋವಿಂದ ಪೂಜಾರಿಗೆ ಕೋಟಿ ಕೋಟಿ ವಂಚಿಸಿದ್ದಾರೆ.

ಕಾರಣ ಏನೇ ಇರಲಿ ಭಾರತದಲ್ಲಿ ಆಗುತ್ತಿರುವ ನಾನಾ ವಂಚನೆ ಪೂಜಾರಿಯಂತಾ ಹಿಂದುಳಿದ ಜಾತಿಗಳವರಿಗೆ ಅರ್ಥ ಆಗುವುದು ಯಾವಾಗ? ಇವರು ಸಮಾಜಕ್ಕೆ ಐದು ಪೈಸೆ ಒದಗದವರು. ಹಿಂದೂ ಸನಾತನ ಬೋರ್ಡಿನ ಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ರೂಪಾಯಿ ದೇಣಿಗೆ ನೀಡಿ ವೇದಿಕೆಯಲ್ಲಿ ಕುರ್ಚಿ ಬಿಸಿ ಮಾಡಿ ಬರುತ್ತಾರೆ.