ದುಬಾಯಿಯಲ್ಲಿ ನಡೆದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ರಾಣಾ ಸಿಂಗ್‌ರನ್ನು ಸೋಲಿಸಿದ ಪಾಕಿಸ್ತಾನದ ಶರಂಜೈನ್ ರಿಂದ್ ಅವರು ಪ್ರಶಸ್ತಿ ಸ್ವೀಕರಿಸಲು ಪಾಕಿಸ್ತಾನದ ಮತ್ತು ಭಾರತದ ಧ್ವಜ ಹಿಡಿದು ಬಂದು ಸೌಹಾರ್ದತೆ ಮೆರೆದರು.

ಅವರು ಕೊನೆಯ ಬಲವಾದ ಪಂಚ್ ಮೂಲಕ ಭಾರತದ ಸ್ಪರ್ಧಿಯನ್ನು 2-1ರಿಂದ ಸೋಲಿಸಿದರು. ಎರಡು ಧ್ವಜದ ಬಗೆಗೆ ನಿರೂಪಕರು ಕಾರಣ ಕೇಳಿದರು.

ನಾವು ಸ್ಪರ್ಧಿಗಳು, ವೈರಿಗಳಲ್ಲ. ಒಂದಾಗಿ ಉಳಿದರೆ ಸಾಕಷ್ಟು ಸಾಧಿಸಬಲ್ಲೆವು. ರಾಜಕಾರಣಿಗಳು ನಮ್ಮನ್ನು ಒಡೆಯುತ್ತಿದ್ದಾರೆ. ಅದು ಕೂಡದು ಎಂದು ದ್ವಿಬಾವುಟ ಎಂದು ಹೇಳಿದರು.  ಸ್ಪರ್ಧೆ ನೋಡಲು ಬಂದಿದ್ದ ನಟ ಸಲ್ಮಾನ್ ಖಾನ್ ಈ ಸೌಹಾರ್ದತೆ ಅಮರವಾಗಲಿ ಎಂದರು.