ಮುಂಬಯಿ: ಕರ್ನಾಟಕ ಸಂಘ ದುಬೈ (ಕೆಎಸ್‍ಡಿ) ಪರ್ವ ಗ್ರೂಪ್‍ನ ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಕಳೆದ ಶುಕ್ರವಾರ ಅಲ್ ನಾಸರ್ ಲೀಸರ್ ಲ್ಯಾಂಡ್‍ನಲ್ಲಿ ಗ್ರ್ಯಾಂಡ್ ಸ್ಟೇಜ್‍ನಲ್ಲಿ "ಮೆಗಾ ಡ್ಯಾನ್ಸ್ ಕಪ್-ದುಬೈ 2025" ಪ್ರಶಸ್ತಿಗಾಗಿ ಸ್ಪರ್ಧೆ ಆಯೋಜಿಸಿದ್ದು ಈ ವೃತ್ತಿಪರ ನೃತ್ಯಗಾರರ ಸ್ಪರ್ಧೆಯು ದುಬೈನ ಸಾಂಸ್ಕೃತಿಕ ರಂಗವನ್ನು ಆಶ್ಚರ್ಯ ಚಕಿತಗೊಳಿಸಿತು.

ಸೈಯಾನ್ ಪ್ರಾಪರ್ಟೀಸ್ ಎಂಡಿ ಪ್ರವೀಣ್ ಕುಮಾರ್ ಅಮರನಾಥ್, ಆಕ್ಮೆ ಎಂಡಿ ಹರೀಶ್ ಶೇರಿಗಾರ್ ಮತ್ತು ಸ್ಯಾಂಡಲ್‍ವುಡ್ ಸೆಲೆಬ್ರಿಟಿ ನಟ, ಡ್ಯಾನ್ಸರ್ ಪೃಥ್ವಿ ಅಂಬಾರ್ ಮತ್ತಿತರ ಗಣ್ಯರನ್ನೊಳಗೊಂಡು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ಪ್ರಧಾನ ಕಾರ್ಯದರ್ಶಿ ಮನೋಹರ್ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕೋಶಾಧಿಕಾರಿ ನಾಗರಾಜ್ ರಾವ್, ಸಾಂಸ್ಕೃತಿಕ ಕಾರ್ಯದರ್ಶಿ ರಾಧಿಕಾ ಸತೀಶ್, ಅಡ್ವಿಸ್ ಮರ್ಟಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 

ಪೃಥ್ವಿ ಅಂಬರ್ ಮತ್ತು ಇತರ ಗೌರವಾನ್ವಿತ ತೀರ್ಪುಗಾರರ ಸಮಿತಿಯು ಪ್ಯಾಶನಲ್ ಜ್ಯೂರಿ ಪ್ಯಾನೆಲ್‍ನಿಂದ ಸ್ಪರ್ಧೆ ನಿರ್ಣಯಿಸಲಾಗಿದ್ದು ಖ್ಯಾತ ಕಲಾವಿದರಾದ ಸುಸ್ಮಿತಾ ಧ್ರುವ ಮತ್ತು ಪಂಚಮ್ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಗಳ ತೀರ್ಪುಗಾರರಾಗಿದ್ದರು. ಆರಂಭದಲ್ಲಿ ಪ್ರಾಯೋಜಕರು, ಸೆಲೆಬ್ರಿಟಿಗಳು, ತೀರ್ಪುಗಾರರು, ಕೆಎಸ್‍ಡಿ ಪದಾಧಿಕಾರಿಗಳು, ಪೋಷಕರು, ಸಲಹೆಗಾರರನ್ನು ವಿಶೇಷ ಲಾಂಗ್ ಲಿಮೋಸಿನ್ ಕಾರಿನಲ್ಲಿ ವೇದಿಕೆಗೆ ಕರೆತರುವ ಮೂಲಕ ಭವ್ಯವಾದ ಆಗಮನ ಕಂಡಿತು. 

ಐಪಿಎಫ್‍ನ ಪ್ರತಿಷ್ಠಿತ ವ್ಯಕ್ತಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಾದ ಜಿತೇಂದ್ರ ವೈದ್ಯ, ಸುಚಿತ್ ಕುಮಾರ್, ಲೆ| ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್, ಯುಎಇ ಬಂಟ್‍ನ ಉಪಾಧ್ಯಕ್ಷ ಪ್ರೇಮನಾಥ್ ಶೆಟ್ಟಿ, ಬಿಲ್ಡ್‍ಮ್ಯಾಕ್ಸ್ ಸಿಒಒ ಸತೀಶ್ ಕೃಷ್ಣಪ್ಪ, ಬಿಲ್ಡ್‍ಮ್ಯಾಕ್ಸ್ ಸಿಒಒ ಸತೀಶ್ ಕೃಷ್ಣಪ್ಪ, ವಾಲ್ಯೂ ಸಾಫ್ಟ್ ಕರ್ನಾಟಕ ಸಿಇಒ ಹೇಮಾನ್ ಸಾಫ್ಟ್ ಸಿಇಒ ಅಬ್ಹಾಬಿ. ಸರ್ವೋತ್ತಮ ಶೆಟ್ಟಿ ಅಬುಧಾಬಿ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷ ಸತೀಶ್ ಪೂಜಾರಿ, ಪ್ರಾಯೋಜಕ ಗುಣಶೀಲ ಶೆಟ್ಟಿ, ಗಮ್ಮತ್ ಕಲಾವಿದರು ಅಧ್ಯಕ್ಷೆ ಲವೀನಾ ಫೆರ್ನಾಂಡಿಸ್, ಯುಎಇ ಬಿಲ್ಲವ ಅಧ್ಯಕ್ಷ ದೀಪಕ್ ಅಮೀನ್, ಯುಎಇ ಬಸವ ಸಮಿತಿ ಅಧ್ಯಕ್ಷ ವೀರೇಶ ಪಾಟೀಲ, ಬಿರುವೆರ್ ಕುಡ್ಲ ದುಬೈ ಅಧ್ಯಕ್ಷ ಸಂದೀಪ್ ಕೋಟ್ಯಾನ್, ಸುಪ್ರಸಿದ್ಧ ಅರೇಬಿಕ್ ನಟ ಅಬ್ದುಲ್ಲಾ ಅಲಿಜಫಲಿ ಸೇರಿದಂತೆ ಅನೇಕ ಮಹಾನೀಯರು ಉಪಸ್ಥಿತರಿದ್ದರು.

ಎಲ್ಲಾ ಸಮುದಾಯದ ಮುಖಂಡರಿಂದ ಬೆರಗುಗೊಳಿಸುವ ಡ್ಯಾನ್ಸ್ ಸಾಗಾ ಸಾಕ್ಷಿಯಾಯಿತು. ಕಿರಣ್ ಗೌಡ, ಕೆ.ಎಂ.ಅಶ್ರಫ್, ಡಾ| ರಶ್ಮಿ ನಂದಕಿಶೋರ್, ಬಾಲ ಸಾಲಿಯಾನ್, ಶೋಧನ್ ಪ್ರಸಾದ್, ಈಶ್ವರಿದಾಸ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಜ, ಸಂದೇಶ್ ಜೈನ್, ಜಸ್ಮಿತಾ ವಿವೇಕ್, ಸುಗಂದರಾಜ್ ಬೇಕಲ್, ನೋಯಲ್ ಅಲ್ಮೇಡ, ವಿಜಯ್ ಗುಜ್ಜರ್, ಮೇಘಾ ಮತ್ತು ಸ್ಗರ ಶೆಟ್ಟರ್ ಮತ್ತು ಸ್ಪರ್ಧಾ ತಂಡದ ನೃತ್ಯ ನಿರ್ದೇಶಕರು ಹಾಜರಿದ್ದರು.

ಕಾರ್ಯಕ್ರಮದ  ಶೀರ್ಷಿಕೆಯಾಗಿದ್ದ ಪರ್ವ ಗ್ರೂಪ್‍ನ ಸಹ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ಸೇರಿದಂತೆ ಪ್ರಾಯೋಜಕರಾದ ಮಲಬಾರ್ ಗಾಡ್ & ಡೈಮಂಡ್, ಪುರವಂಕರ, ಸ್ಪ್ರೇಟೆಕ್ ಕಾಂಟ್ರಾಕ್ಟಿಂಗ್, ಬಿ-ಟೌನ್ ರೆಸ್ಟೋರೆಂಟ್ ಚೈನ್, ಫೇಬರ್ ಕ್ಯಾಸಲ್ ಇದರ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. ಕೆಎಸ್‍ಡಿ ಪೋಷಕ ಮತ್ತು ದುಬೈ ಮೂಲ ಎಡ್ವರ್ಟೈಸಿಂಗ್ ಎಲ್‍ಎಲ್‍ಸಿ ಸಂಸ್ಥಾಪಕ ಹರೀಶ್ ಬಂಗೇರ ಪ್ರಾಯೋಜಕತ್ವರನ್ನು ಗೌರವಿಸಿ ಅಭಿವಂದಿಸಲಾಯಿತು. 

ಮನೋಹರ್ ಹೆಗ್ಡೆ, ರಾಧಿಕಾ ಸತೀಶ್, ಮಲ್ಲಿಕಾರ್ಜುನ್ ಗೌಡ ಮತ್ತು ನಾಗರಾಜ್ ರಾವ್, ಕರ್ನಾಟಕ ಸಂಘ ದುಬೈನ ಕಾರ್ಯಕಾರಿ ಸಮಿತಿಯ ಲಾರೆನ್ಸ್ ನಜರೆತ್, ಸಿದ್ದಲಿಂಗೇಶ್ ಬಿ.ಆರ್, ಸುನೀಲ್ ಗವಾಸ್ಕರ್, ಶ್ವೇತಾ ಜಾಧವ್, ಶ್ವೇತಾ ರಾಮ್, ಸಮೀರ್ ಮೊಹಮ್ಮದ್ ಶೆರಿಫ್, ಹರೀಶ್ ಕೊರಿತ್, ರೋಹಿತ್ ಸಹಕರಿಸಿದ್ದು ವಿಜೇತರಿಗೆ ಲೈಫ್ ಫಾರ್ಮಸಿ ಮತ್ತು ಐಡಿ ಫುಡ್ಸ್ ಮತ್ತು ಕಾಸ್ಮೊ ನೀಡಿದ ಪ್ರಮಾಣಪತ್ರಗಳು, ಸ್ಮರಣಿಕೆ, ನಗದು ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್‍ಗಳನ್ನು ನೀಡಿ ಗೌರವಿಸಲಾಯಿತು. 

ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರು ಸ್ವಾಗತಿಸಿ ಪ್ರಸ್ತಾವನೆಗೈದರು.  ಯುಎಇ ಆ್ಯಂಕರ್‍ಗಳಾದ ಅಂತ್ರಿಜಾ, ಆರತಿ ಅಡಿಗ ಮತ್ತು ಶ್ರೀ ಹರಿ ಅವರ ವರ್ಚಸ್ವಿ ನಿರೂಪಣೆ ಮತ್ತು ವಾಕ್ಚಾತುರ್ಯವು ಪ್ರೇಕ್ಷಕರನ್ನು ಆಕರ್ಷಿಸಿತು. ದಯಾ ಕಿರೋಡಿಯನ್ ಕೃತಜ್ಞತೆ ಸಲ್ಲಿಸಿದರು.

ಮನೋಹರ್ ಹೆಗ್ಡೆ, ಬೃಂದಾ ಮಂಜುನಾಥ್, ಮಮತಾ ರಜಾಕ್ ಮತ್ತು ರೇಷ್ಮಾ ಡಿಸೋಜಾ ಸ್ಪರ್ಧೆಗಳನ್ನು ಉತ್ತಮವಾಗಿ ನಿರ್ವಹಿಸಿದರು. ವಿನುತ ಕೆಎಸ್ ಮತ್ತು ತಂಡದಿಂದ ಉತ್ತಮವಾಗಿ ನಿರ್ವಹಿಸಲಾದ ಕಲೆ ಮತ್ತು ಕರಕುಶಲ ಪ್ರದರ್ಶನವನ್ನು ಸಹ ಒಳಗೊಂಡಿತ್ತು. ಸಂಜೆ ಸಪ್ತಗಾಯಕರಾದ ಗುಣಶೀಲ್ ಶೆಟ್ಟಿ, ಜ್ಯೋತಿ ಮಲ್ಲಿಕಾರ್ಜುನ್, ನಾಗರಾಜ್ ರಾವ್, ದಿನೇಶ್ ದೊಡ್ಡನಗುಡೆ, ಅಶೋಕ್ ಬೈಲೂರು, ಸುಕನ್ಯಾ ಶರತ್ ಮತ್ತು ರಾಮಚಂದ್ರ ಬೆದ್ರಡ್ಕ ಅವರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.