ಕೋವಿಡ್ 19 ಒಗಟು ಲೋಕ‌ ಬಿಟ್ಟಿಲ್ಲ. ವೈರಸ್‌ಗಳು ಲಸಿಕೆಗೂ ಸವಾಲು ಎಸೆದಿವೆ. ಶುಕ್ರವಾರದ 24 ಗಂಟೆಗಳಲ್ಲಿ ಲೋಕದಲ್ಲಿ 5.2 ಲಕ್ಷದಷ್ಟು ಹೊಸ ಸೋಂಕಿತರು ಪಾಸಿಟಿವ್ ಪಡೆದರು. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ  8 ಸಾವಿರದಷ್ಟು ಇತ್ತು. ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು  23,50,39,642ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 48,05,097 ದಾಟಿ ಸಾಗಿದೆ.

ಭಾರತದಲ್ಲಿ ನೋವೆಲ್ ಕೋವಿಡ್ 19 ಈಗ ಸ್ವಲ್ಹ ತೋಟಿಗೆ ಬಂದ ಲಕ್ಷಣ ಏನೋ ತಾನೋ ಇದೆ. ನಿನ್ನೆ ದಿನ ನಮ್ಮ ಜನ ಭಾರತ ದೇಶದಲ್ಲಿ 26,727 ಮಂದಿ ಪಾಸಿಟಿವ್ ಸಾಂಕ್ರಾಮಿಕ ಎನಿಸಿದರು.  ಸೋಂಕಿತರ ಮೊತ್ತವು ಅಲ್ಲಿಗೆ 3,37,89,398ಕ್ಕೆ ಏರಿದೆ. ಶುಕ್ರವಾರ ದಿನ ದೇಶದಲ್ಲಿ 277 ನಮ್ಮ ಜನ ಕೊರೋನಾ  ಸಾವು ಹೊಂದಿದರು. ದೇಶದಲ್ಲಿ ಈಗ ಕೋವಿಡ್‌ಗೆ ಬಲಿಯಾದವರ ಸಂಖ್ಯೆಯು 4,48,605 ದಾಟಿ ಸಾಗಿದೆ.

ರಾಜ್ಯದಲ್ಲಿ ಶುಕ್ರವಾರ ಹೊಸದಾಗಿ 589 ಮಂದಿ ಕೊರೋನಾ ಸಾಂಕ್ರಾಮಿಕಕ್ಕೆ ಒಳಗಾದರು. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವ್ ಪಡೆದವರ ಸಂಖ್ಯೆ 29,76,589ಕ್ಕೆ ಏರಿತು. ನಿನ್ನೆ ದಿನ ರಾಜ್ಯದಲ್ಲಿ 13 ಮಂದಿ ಕೊರೋನಾ ಮರಣ ಕಂಡರು. ಇದರೊಂದಿಗೆ ಕರ್ನಾಟಕದಿಂದ ಕೋವಿಡ್‌ಗೆ ಬಲಿ ಹೋದವರ ಸಂಖ್ಯೆಯು 37,807ಕ್ಕೆ ಏರಿತು.

ಶುಕ್ರವಾರದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಮೃತ್ಯು ದಂಡಕ್ಕೆ 2 ಮಂದಿ ಮರಣ ಕಂಡರು. ಒಟ್ಟು ಸಾವಿನ ಮೊತ್ತವು 1,662ಕ್ಕೆ ಏರಿದೆ. ನಿನ್ನೆಯ ದಿನ ದಕದಲ್ಲಿ 86 ಜನ ಹೊಸದಾಗಿ ಸೋಂಕು ಭಾಜನರಾದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 1,14,388 ದಾಟಿ ಸಾಗಿತು.

ಉಡುಪಿ ಜಿಲ್ಲೆಯಲ್ಲಿ ನಿನ್ನೆ ಕೊರೋನಾದಿಂದ ಮರಣ ಸಂಭವಿಸಿದೆ. ಜಿಲ್ಲೆಯಲ್ಲಿ ಕೋವಿಡ್ ಬಲಿ ಪಡೆದವರ ಸಂಖ್ಯೆಯು 482ಕ್ಕೇರಿದೆ. ಶುಕ್ರವಾರ ಪಾಸಿಟಿವ್ ಸಾಂಕ್ರಾಮಿಕ ಎನಿಸಿದವರ ಸಂಖ್ಯೆ 40. ಪಾಸಿಟಿವ್ ಒಂದಂಕಿ ತಲುಪಿದ್ದು ಒಂದೇ ದಿನಕ್ಕೆ. ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆಯು 76,308ಕ್ಕೆ ಏರಿತು.