ಮಂದಾರಬೈಲು:  ಶ್ರೀ ಕ್ಷೇತ್ರ ಮಂದಾರಬೈಲು ರಕ್ತೇಶ್ವರಿ, ಮಂತ್ರದೇವತೆ, ರಾಹು ಗುಳಿಗ ಸನ್ನಿಧಿಯಲ್ಲಿ ಕೋಲ ಬಲಿ ಸೇವೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗಿದ್ದು, ಫೆ. 5ರ ವರೆಗೆ ಜರಗಲಿದೆ. ಇದೇ ಸಂದರ್ಭದಲ್ಲಿ ಶನಿವಾರ ಶ್ರೀ ಕ್ಷೇತ್ರದಲ್ಲಿ " ಮಂದಾರಬೈಲ್‌ದ ಅಪ್ಪೆ ಮಂತ್ರದೇವತೆಗ್ ಶರಣು" ಎಂಬ ತುಳು ಭಕ್ತಿಗೀತೆಗಳ ಧ್ವನಿ ಸುರುಳಿಯನ್ನು ಶ್ರೀ ಕ್ಷೇತ್ರ ಮಂದಾರ ಬೈಲ್‌ನ ಧರ್ಮದರ್ಶಿಗಳಾದ ಪ್ರಕಾಶ್ ಪಂಡಿತ್ ಇವರು ಬಿಡುಗಡೆಗೊಳಿಸಿದರು.

ಯೋಗಗುರು ಜಗದೀಶ್ ಶೆಟ್ಟಿ ಬಿಜೈ, ಪ್ರಮುಖರಾದ ಕಿರಣ್ ಪಕಳ, ವಿನಯ ಆರ್ ಶೆಟ್ಟಿ, ಕೃಷ್ಣ ಪಂಡಿತ್, ಶೋಭಾ ವಿಶ್ವನಾಥ್ ಶೆಟ್ಟಿಗಾರ್, ಯತೀಶ್ ಇಂಜಿನಿಯರ್,  ವರುಣ್ ಆಚಾರ್, ಗೋಪಾಲ್ ಶೆಟ್ಟಿ ರೂಪ, ಲತಾ, ರಾಮ ಗುರಿಕಾರರು, ಸುರೇಶ್ ಪೂಜಾರಿ, ಹರೀಶ್ ಪೂಜಾರಿ, ನಿತಿನ್ ಮುಂತಾದವರು ಉಪಸ್ಥಿತರಿದ್ದರು.