ಮಂಗಳೂರು: ನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭದಲ್ಲಿ ಶ್ರೀ ಚಿತ್ರಾಪುರ ಮಠ ಸಂಸ್ಥಾನ ಶಿರಾಲಿ ಇದರ ಮಠಾಧೀಶರಾದ ಶ್ರೀಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಭೇಟಿ ನೀಡಿದರು ,




ಶ್ರೀ ದೇವರ ದರ್ಶನ ,ಮಂಗಳಾರತಿ ಬಳಿಕ ಶ್ರೀಗಳವರಿಂದ ಆಶೀರ್ವಚನ ನಡೆಯಿತು . ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಸಮಾಜಮುಖಿ ಚುಟುವಟಿಕೆ ಹಾಗೂ ವ್ಯವಸ್ಥೆ ಬಗ್ಗೆ ಶ್ರೀಗಳವರು ಮೆಚ್ಚುಗೆ ಸೂಚಿಸಿದರು . ಈ ಸಂದರ್ಭದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಪದಾಧಿಕಾರಿಗಳು , ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ,ವಿನೋದ್ ಶೆಣೈ , ರಘುವೀರ್ ಕಾಮತ್ , ಗಜಾನನ ಪೈ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಸತೀಶ್ ಪ್ರಭು ,ಆನಂದ ಪಾಂಗಳ , ಸುರೇಶ್ ಕಾಮತ್ , ಯಸ್ ಆರ್ ಕುಡ್ವ , ಜೀವನರಾಜ್ ಶೆಣೈ , ಅಭಿಷೇಕ್ ಭಂಡಾರಿ ,ನಂದನ್ ಮಲ್ಯ ,ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತರಿದ್ದರು ,