ಮಂಗಳೂರು: ಇತಿಹಾಸವನ್ನು ಅರಿಯದವನು ಇತಿಹಾಸವನ್ನುನಿರ್ಮಿಸಲಾರ, ವಿಶ್ವಾದ್ಯಂತ ಸ್ತ್ರೀಯರನ್ನು ಆಡಳಿತ ದೂರವಿರಿಸಿದ ವ್ಯವಸ್ಥೆ ಇರುವಾಗ ಬಾಲ್ಯದಿಂದಲೇ ರಾಷ್ಟ್ರದ ಬಗ್ಗೆ ಸಾಮಾಜಿಕ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ ಹಲವಾರು ರಾಣಿಯರು ಸುಭೀಕ್ಷ ರಾಜ್ಯವ್ಯವಸ್ಥೆಯನ್ನು ಕಲ್ಪಿಸಿದ ವೀರರಾಣಿಯರ ನಾಡು ತುಳುವರದ್ದು. ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ, ಅಬ್ಬಕ್ಕನ ಬಗೆಗಿನ ಇತಿಹಾಸವನ್ನು ಪಠ್ಯದಲ್ಲಿ ಸೇರಿಸದೆಕೈ ಬಿಟ್ಟದ್ದು ಅತ್ಯಂತ ದುಃಖದಾಯಕ. ಆಕೆ ನಾಡಿನ ಸ್ವಾಭಿಮಾನಕ್ಕಾಗಿ 4 ದಶಕಗಳ ಕಾಲ ಹೋರಾಡಿ 500 ವರ್ಷಗಳು ಸಂದಿವೆ. ಇಂದಿನ ಸಮಾಜದ ಸ್ವಾಸ್ಥ್ಯಕ್ಕಾಗಿ 500 ಅಬ್ಬಕ್ಕರಾಗಿ ಬೆಳೆದು ಮುಂದೆ ಬರಲು ಸಿದ್ಧರಿದ್ದೀರಾ ಎಂಬ ಡಿ ವೇದವ್ಯಾಸ್ ಕಾಮತ್, ಮಂಗಳೂರು ದಕ್ಷಿಣ ಸಭಾ ವಿಧಾನಸಭಾ ಕ್ಷೇತ್ರದ ಶಾಶಕರ ಪ್ರಶ್ನೆಗೆ ವಿದ್ಯಾರ್ಥಿನಿಯರು ಒಕ್ಕೊರಲಿನಿಂದ ನೀಡಿದ ಧನಾತ್ಮಕ ಉತ್ತರ ಅಬ್ಬಕ್ಕ@ 500 ಸಮಾವೇಶವನ್ನು ಪರಿಣಾಮಕಾರಿಯಾಗಿಸಿತು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಭಾಗ ಮತ್ತು ನಗರದ ಡಾ ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು ಇದರ ಆಂತರಿಕ ಗುಣಮಟ್ಟದ ಭರವಸೆ ಕೋಶ ಮತ್ತು ಕನ್ನಡ ವಿಭಾಗಗಳ ಸಹಯೋಗದಲ್ಲಿ ಅಬ್ಬಕ್ಕ@500 ಪ್ರೇರಣಾದಾಯಿ ಉಪನ್ಯಾಸ ಸರಣಿಯ ಎಸಳು-94ನ್ನು ದೀಪಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.



ಮೂಡಬಿದಿರೆಯ ಇತಿಹಾಸ ತಜ್ಞರು ಮತ್ತು ಖ್ಯಾತ ಲೇಖಕರಾಗಿರುವ ಡಾ. ಪುಂಡಿಕಾಯಿ ಗಣಪಯ್ಯ ಭಟ್ಇವರು ತಮ್ಮ ಸಂಪನ್ಮೂಲ ಭಾಷಣದಲ್ಲಿ ತುಳುನಾಡಿನಲ್ಲಿ 29 ರಾಣಿಯರು ದಕ್ಷ ಆಡಳಿತ ನಡೆಸಿದ ಇತಿಹಾಸದ ಪುರಾವೆ ಇದ್ದರೂ ನಮ್ಮವರಿಗೆ ಈ ಬಗ್ಗೆ ಅರಿವಿನ ಕೊರತೆ ಇತ್ತು.ಆದಾಗ್ಯೂ ಈ ಕಾಲಘಟ್ಟದಲ್ಲಿ ಇತ್ತೀಚಿಗೆ ಹೆಣ್ಣುಮಕ್ಕಳಲ್ಲಿ ಬೆಳೆಯುತ್ತಿರುವ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯ ಬಗ್ಗೆ ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲ ಡಾ. ಎಂ ಜಯಕರ ಭಂಡಾರಿಯವರು ವಹಿಸಿದ್ದರು. ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ. ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕರಾಗಿರುವ ಡಾ. ಸುಭಾಷಿಣಿ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿದರು. ಡಾ. ಜ್ಯೋತಿಪ್ರಿಯ ಅತಿಥಿಗಳನ್ನು ಪರಿಚಯಿಸಿ, ಶ್ರೀದೇವಿ ಪ್ರಸಾದ್ ಸ್ಪಂದಿಸಿದರು . ಯಕ್ಷಗಾನ ಹಾಗೂ ಜಾನಪದ ವಿದ್ವಾಂಸ ಭಾಸ್ಕರ ರೈಕುಕ್ಕುವಳ್ಳಿ, KRMSS, ಮಂಗಳೂರು ವಿಭಾಗದ ಕಾರ್ಯದರ್ಶಿ ರಾಜೇಶ್, ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.