ಮಂಗಳೂರು: ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಜುಲೈ 25 ಮತ್ತು 26 ರಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಜುಲೈ 25 ರಂದು  ಮಧ್ಯಾಹ್ನ 12:45  - ಮಂಗಳೂರು ವಿಮಾನ ನಿಲ್ದಾಣ ಆಗಮನ,  1:20-  ಸಕ್ರ್ಯೂಟ್ ಹೌಸ್, ಬಳಿಕ ಉಡುಪಿಗೆ ನಿರ್ಗಮನ. ಜುಲೈ 26 ರಂದು  ಮಧ್ಯಾಹ್ನ 12 ಗಂಟೆ - ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ  ಭಾರತೀಯ ರೆಡ್ ಕ್ರಾಸ್ ಸೊಸೈಟಿ ( ಐ.ಆರ್.ಸಿ.ಎಸ್)  ಶತಮಾನೋತ್ಸವ ಕಟ್ಟಡದ ಉದ್ಘಾಟನೆ,  3:30-  ಮೂಡಬಿದ್ರಿ  ಆಳ್ವಾಸ್ ಕಾಲೇಜಿನಲ್ಲಿ ದಿ ಪ್ರೇರಣಾ ದಿವಸ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ. 

ಸಂಜೆ 5:50  ರಾಜ್ಯಪಾಲರು ಮಂಗಳೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.